ಬೆಂಗಳೂರಿನಲ್ಲಿ ಮತ್ತೆ-ಮತ್ತೆ ಕುಸಿಯುತ್ತಿರುವ ರಸ್ತೆಗಳು: BBMP ವಿರುದ್ಧ ಸಾರ್ವಜನಿಕರ ಆಕ್ರೋಶ

Update: 2023-01-17 08:13 GMT

ಬೆಂಗಳೂರು : ನಗರದ ಮಹಾಲಕ್ಷ್ಮಿ ಲೇಔಟ್​ ಮುಖ್ಯರಸ್ತೆಯ ಸಪ್ತಗಿರಿ ಕಲ್ಯಾಣ ಮಂಟಪದ ಬಳಿ ಏಕಾ ಏಕಿ ರಸ್ತೆ ಕುಸಿದಿದ್ದು, ಬಿಬಿಎಂಪಿ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾರ್ವಜನಿಕರು ಆಕ್ರೋಶ ಹೊರ ಹಾಕಿದ್ದಾರೆ.

ಇಲ್ಲಿ ಪೈಪ್‌ಲೈನ್ ಕಾಮಗಾರಿ ಬಳಿಕ ಡಾಂಬರೀಕರಣಗೊಂಡ ಎರಡೇ ದಿನಗಳಲ್ಲಿ ರಸ್ತೆಯಲ್ಲಿ ಗುಂಡಿ ಬಿದ್ದಿದೆ. ಸದ್ಯ ದುರಸ್ತಿ ಕಾರ್ಯ ನಡೆಯುತ್ತಿದೆ ಎಂದು ತಿಳಿದು ಬಂದಿದೆ. 

ಕಳಪೆ ಕಾಮಗಾರಿಯಿಂದ ಏಕಾಏಕಿ ರಸ್ತೆ ಕುಸಿದಿದ್ದು, ಗುಂಡಿ ಬಿದ್ದ ಸ್ಥಳದಲ್ಲಿ ಬಿಬಿಎಂಪಿ ತಕ್ಷಣಕ್ಕೆ ಯಾವುದೇ ಸುರಕ್ಷತಾ ಕ್ರಮ ಕೈಗೊಂಡಿಲ್ಲ ಎಂದು ಸಾರ್ವಜನಿಕರು ಆಕ್ರೋಶ ಹೊರ ಹಾಕಿದ್ದಾರೆ.

Similar News