ಬೈಂದೂರು: ಮರದ ಕೊಂಬೆ ತಲೆಗೆ ಬಿದ್ದು ವ್ಯಕ್ತಿ ಮೃತ್ಯು
Update: 2023-01-25 16:06 GMT
ಬೈಂದೂರು: ಮರದ ಗೊಂಬೆ ತುಂಡಾಗಿ ತಲೆಯ ಮೇಲೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಬಗ್ಗೆ ವರದಿಯಾಗಿದೆ.
ಮೃತರನ್ನು ಪಡುವರಿ ಗ್ರಾಮದ ಬಸವನ ಕೆರೆಯ ರಾಮ ದೇವಾಡಿಗ(70) ಎಂದು ಗುರುತಿಸಲಾಗಿದೆ.
ಜ.21ರಂದು ನಾಗೂರಿನ ತನ್ನ ಹೆಂಡತಿ ಮನೆಯಿಂದ ಗದ್ದೆಗೆ ಕ್ರಿಮಿನಾಶಕ ಸಿಂಪಡಿಸಲು ನಡೆದುಕೊಂಡು ಹೋಗುತ್ತಿದ್ದ ರಾಮ ದೇವಾಡಿಗರ ತಲೆಯ ಮೇಲೆ ಗೇರು ಮರದ ಕೊಂಬೆ ತುಂಡಾಗಿ ಬಿತ್ತೆನ್ನಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಇವರು ಚಿಕಿತ್ಸೆ ಫಲಕಾರಿಯಾಗದೆ ಜ.25ರಂದು ಮಧ್ಯಾಹ್ನ ವೇಳೆ ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟರು.
ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಇದನ್ನೂ ಓದಿ: 2023ನೇ ಸಾಲಿನ ಪದ್ಮ ಪ್ರಶಸ್ತಿ ಪ್ರಕಟ: ಕರ್ನಾಟಕದ ಇಬ್ಬರಿಗೆ ಪದ್ಮಶ್ರೀ