ಕೊಲ್ಲೂರು: ಹೊಟೇಲಿನಲ್ಲಿ ತಂಗಿದ್ದ ಕೇರಳದ ಮಹಿಳೆ ಮೃತ್ಯು

Update: 2023-01-27 17:25 GMT

ಕೊಲ್ಲೂರು: ಕೊಲ್ಲೂರಿನ ಹೊಟೇಲಿನಲ್ಲಿ ತಂಗಿದ್ದ ಕೇರಳದ ಮಹಿಳೆಯೊಬ್ಬರು ಉಸಿರಾಟದ ಸಮಸ್ಯೆಯಿಂದ ಮೃತಪಟ್ಟ ಘಟನೆ ಜ.26 ರಂದು ಮುಂಜಾನೆ ವೇಳೆ ನಡೆದಿದೆ.

ಮೃತರನ್ನು ಕೇರಳ ಎರ್ನಾಕುಲಂ ಜಿಲ್ಲೆಯ ಎಲ್ಲೂರು ಗ್ರಾಮದ ನಿವಾಸಿ  ಉಷಾ ಕುಮಾರಿ(54) ಎಂದು ಗುರುತಿಸಲಾಗಿದೆ. ಇವರು ಜ.24ರಂದು ಕುಟುಂಬ ಸಮೇತರಾಗಿ ಕೇರಳದಿಂದ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಬಂದಿದ್ದು, ಜ.25ರಂದು ಮಹಾಲಕ್ಷ್ಮೀ ರೆಸಿಡೆನ್ಸಿ ಹೋಟೆಲ್‌ನಲ್ಲಿ ಉಳಿದುಕೊಂಡಿ ದ್ದರು. ಅಲ್ಲಿ ಉಷಾ ಅವರಿಗೆ ಉಸಿರಾಟದ ಸಮಸ್ಯೆ ಉಲ್ಬಣಿಸಿದ್ದು, ಜ.26ರಂದು ಮುಂಜಾನೆ ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುವ ದಾರಿ ಮಧ್ಯೆ ಅವರು ಮೃತಪಟ್ಟರು.

ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಕೊಣಾಜೆ: ಅಪಘಾತವೆಸಗಿ ಪರಾರಿಯಾಗಲು ಯತ್ನಿಸುವ ವೇಳೆ ಹೊಂಡಕ್ಕೆ ಉರುಳಿ ಬಿದ್ದ ಕಾರು

Similar News