ಫೆ.17ರಿಂದ 25ರವರೆಗೆ ತೋಡಾರು ಮಖಾಂ ಉರೂಸ್

Update: 2023-01-30 10:33 GMT

ಮೂಡಬಿದಿರೆ: ಆವರಣದಲ್ಲಿ ಅಂತ್ಯ ವಿಶ್ರಮಿಸುತ್ತಿರುವ ಸೈಯದ್ ವಲಿಯುಲ್ಲಾಹಿ ( ಖ.ಸಿ) ರವರ ಹೆಸರಿನಲ್ಲಿ ಪ್ರತೀ ಎರಡು ವರ್ಷಗಳಿಗೊಮ್ಮೆ ಆಚರಿಸಿಕೊಂಡು ಬರುತ್ತಿರುವ ಉರೂಸ್ ಸಮಾರಂಭವು ಫೆ.17ರಿಂದ 25ರವರೆಗೆ ನಡೆಯಲಿದೆ ಎಂದು ಉರೂಸ್ ಕಮಿಟಿಯ ಅಧ್ಯಕ್ಷ ಮುನೀರ್ ಇಸ್ಮಾಯಿಲ್ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಫೆ. 17ರ ಶುಕ್ರವಾರ ಜುಮಾ ನಮಾಝ್ ಬಳಿಕ ಅಬ್ದುಲ್ಲಾ ರಹ್ಮಾನಿ ಬಾಂಬಿಲ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ತೋಡಾರು ಬದ್ರಿಯಾ ಜುಮ್ಮಾ ಮಸೀದಿಯ ಅಧ್ಯಕ್ಷರಾದ ಎಮ್.ಎ.ಎಸ್. ಆಸಿಫ್ ಧ್ವಜಾರೋಹಣ ನೆರವೇರಿಸಲಿದ್ದಾರೆ. ಅದೇ ದಿನ ಸಂಜೆ ಸ್ವಲಾತ್ ಹಾಗೂ ಮಜ್ಲಿಸುನ್ನೂರ್ ವಾರ್ಷಿಕ ನಡೆಯಲಿದ್ದು, ಅಂದು ದ.ಕ.ಖಾಝಿ ಶೈಖುನಾ ತ್ವಾಖಾ ಅಹ್ಮದ್ ಮುಸ್ಲಿಯಾರ್, ಶೈಖುನಾ ಉಸ್ಮಾನುಲ್ ಫೈಝಿ ತೋಡಾರು ಹಾಗೂ ಸೈಯದ್ ಜಲಾಲುದ್ದೀನ್ ತಂಙಳ್ ಕುನ್ನುಂಗೈ ಅವರು ಭಾಗವಹಿಸಲಿದ್ದಾರೆ ಎಂದರು.

ಫೆ.18ರಂದು ಇರ್ಷಾದ್ ದಾರಿಮಿ ಮಿತ್ತಬೈಲ್, ಅಶ್ರಫ್ ಫೈಝಿ ಮಿತ್ತಬೈಲ್ ಅವರು ಭಾಗವಹಿಸಲಿದ್ದು, ಫೆ.19ರಂದು ಸೈಯದ್ ಅಕ್ರಮ್ ಆಲಿ ತಂಙಳ್ ಅಂಗರಕರ್ಯ ಹಾಗೂ ಸ್ವದಕತುಲ್ಲಾ ಫೈಝಿ ಅಡ್ಡೂರು ಅವರು ಭಾಗವಹಿಸಿ ಧಾರ್ಮಿಕ ಪ್ರವಚನ ನೀಡಲಿದ್ದಾರೆ ಎಂದರು.

ಫೆ. 20ರಂದು ಉಸ್ತಾದ್ ವಲಿಯುದ್ದೀನ್ ಫೈಝಿ ವಾಯಕ್ಕಾಡ್ ಅವರ ನೇತೃತ್ವದಲ್ಲಿ ನೂರೇ ಅಜ್ಮೀರ್ ನಡೆಯಲಿದ್ದು ಹುಸೈನ್ ದಾರಿಮಿ ರೆಂಜಲಾಡಿ ಅವರು ಪ್ರಾಸ್ತಾವಿಕ ಭಾಷಣ ಮಾಡಲಿದ್ದಾರೆ. ಫೆ. 21ರಂದು ಸಯ್ಯಿದ್ ಝೈನುಲ್ ಆಬಿದೀನ್ ತಂಙಳ್ ಕುನ್ನುಂಗೈ ಅವರು ದುವಾ ನೇತೃತ್ವ ವಹಿಸಲಿದ್ದು ಅಸ್ಲಮ್ ಅಝ್ಹರಿ ಪೊಯ್ಕಂಕಡವು ಮುಖ್ಯ ಪ್ರಭಾಷಣಗಾರರಾಗಿ ಭಾಗವಹಿಸಲಿದ್ದಾರೆ. ಫೆ. 22ರಂದು ಶೈಖುನಾ ಅಬ್ದುಲ್ ಖಾದರ್ ಅಲ್ ಖಾಸಿಮಿ ಬಂಬ್ರಾಣ ಅವರ ನೇತೃತ್ವದಲ್ಲಿ ದುವಾ ನೆರವೇರಲಿದ್ದು, ಆಶಿಕ್ ದಾರಿಮಿ ಅಲಪುಝ ಮುಖ್ಯ ಪ್ರಭಾಷಣಗಾರರಾಗಿ ಭಾಗವಹಿಸಲಿದ್ದಾರೆ. ಫೆ. 23 ರಂದು ಸೈಯದ್ ಬಾಅಲವಿ ತಂಙಳ್ ಕುಕ್ಕಾಜೆ ಅವರು ದುವಾ ನೇತೃತ್ವ ವಹಿಸಲಿದ್ದು, ಅಬ್ದುಲ್ಲಾ ರಹ್ಮಾನಿ ಬಾಂಬಿಲ ಅವರು ಮುಖ್ಯ ಪ್ರಭಾಷಣಗಾರರಾಗಿ ಭಾಗವಹಿಸಲಿದ್ದಾರೆ. ಫೆ. 24ರಂದು ಸೈಯದ್ ಝೈನುಲ್ ಆಬಿದೀನ್ ಜಿಫ್ರಿ ತಂಙಳ್ ಬೆಳ್ತಂಗಡಿ ಅವರ ನೇತೃತ್ವದಲ್ಲಿ ದುವಾ ನೆರವೇರಲಿದ್ದು ಕಾಸರಗೋಡಿನ ಖಲೀಲ್ ಹುದವಿ ಅಲ್ ಮಾಲಿಕಿ ಅವರು ಮುಖ್ಯ ಪ್ರಭಾಷಣಗಾರರಾಗಿ ಭಾಗವಹಿಸಲಿದ್ದಾರೆ.ಅಂದು ಅಸರ್ ನಮಾಝ್ ಬಳಿಕ ಊರವರಿಂದ ಸಂದಲ್ ಮೆರವಣಿಗೆ ನಡೆಯಲಿದೆ ಎಂದರು.

ಫೆ.25ರಂದು ಉರೂಸ್ ಸಮಾರೋಪ ಸಮಾರಂಭದಲ್ಲಿ ಅಸರ್ ನಮಾಝ್ ಬಳಿಕ ಖತಮುಲ್ ಖುರ್ಆನ್ ಹಾಗೂ ಮೌಲಿದ್ ಪಾರಾಯಣ ನಡೆಯಲಿದ್ದು ಇಶಾ ನಮಾಝ್ ಬಳಿಕ ಸಯ್ಯಿದ್ ಸಫ್ವಾನ್ ತಂಙಳ್ ಏಝಮುಲ ಕೇರಳ ಅವರು ದುವಾ ಆಶೀರ್ವಚನ ನೀಡಲಿದ್ದಾರೆ.ಎಸ್.ಕೆ.ಎಸ್.ಎಸ್.ಎಫ್ . ರಾಜ್ಯಾಧ್ಯಕ್ಣ ರಫೀಕ್ ಅಹ್ಮದ್ ಹುದವಿ ಕೋಲಾರ ಅವರು ಪ್ರಾಸ್ತಾವಿಕ ಭಾಷಣ ಮಾಡಲಿದ್ದು, ಅಬ್ದುಲ್ಲಾ ಸಲೀಮ್ ವಾಫೀ ಅವರು ಮುಖ್ಯ ಪ್ರಭಾಷಣಗಾರರಾಗಿ ಭಾಗವಹಿಸಲಿದ್ದಾರೆ, ಅಂದೇ ಸಂಜೆ ನಡೆಯಲಿರುವ ಸರ್ವಧರ್ಮೀಯ ಸ್ನೇಹಕೂಟದಲ್ಲಿ ರಾಜಕೀಯ ನೇತಾರರು,ವಿವಿಧ ಧಾರ್ಮಿಕ ಮುಖಂಡರು ಭಾಗವಹಿಸಲಿದ್ದಾರೆ ಎಂದು ವರ್ಕಿಂಗ್  ಕಾರ್ಯದರ್ಶಿ ಮುಹಮ್ಮದ್ ಯೂಸುಫ್ ಅವರು ಮಾಹಿತಿ ನೀಡಿದರು.

ಜಮಾತ್ ಕಮಿಟಿಯ ಅಧ್ಯಕ್ಷ ಎಮ್.ಎ.ಎಸ್. ಆಸಿಫ್,ಉರೂಸ್ ಕಮಿಟಿಯ ಪ್ರಧಾನ ಕಾರ್ಯದರ್ಶಿ ಬಾವಾ ಮುಹಿಯುದ್ದೀನ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Similar News