ಉಳ್ಳಾಲ: ಟೋಲ್ ಸಿಬ್ಬಂದಿ ದೌರ್ಜನ್ಯ ವಿರುದ್ಧ ಪ್ರತಿಭಟನೆ

Update: 2023-02-06 13:57 GMT

ಉಳ್ಳಾಲ: ನಾಗರಿಕ ಹಿತರಕ್ಷಣಾ ವೇದಿಕೆ ಕೆ.ಸಿ.ರೋಡ್ ಇದರ ವತಿಯಿಂದ ತಲಪಾಡಿ ಟೋಲ್ ಗೇಟ್ ಬಳಿ ಮಾಜಿ ತಾ.ಪಂ.ಸದಸ್ಯ ಸಿದ್ದೀಕ್ ತಲಪಾಡಿಯವರ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.

ಗಡಿನಾಡು ರಕ್ಷಣಾ ವೇದಿಕೆ ಅಧ್ಯಕ್ಷ ಸಿದ್ದೀಕ್ ತಲಪಾಡಿ ಮಾತನಾಡಿ, ನವಯುಗ ಕಂಪೆನಿ ಸಿಬ್ಬಂದಿ ಕೆಲವರ ಮೇಲೆ ಹಲ್ಲೆ ದೌರ್ಜನ್ಯ ನಡೆಸಿದ್ದು, ವೀಡಿಯೊ ವೈರಲ್ ಆಗುತ್ತಿದೆ. ವಾಹನಗಳನ್ನು ತಡೆದು ದೌರ್ಜನ್ಯ, ಹಲ್ಲೆ ನಡೆಸಿದ್ದು ಕೂಡಾ ಇದೆ. ಇದನ್ನು ನೋಡಿ ಕುಳಿತು ಕೊಳ್ಳಲು ನಮಗೆ ಸಾಧ್ಯ ಇಲ್ಲ. ಇನ್ನು ಕ್ರಿಯೆಗೆ ಪ್ರತಿಕ್ರಿಯೆ ಮಾಡಿ ತೋರಿಸುತ್ತೇವೆ. ಕೇಸ್ ಆದರೂ ತೊಂದರೆ ಇಲ್ಲ ಎಂದು ಎಚ್ಚರಿಸಿದರು.

ಅಶ್ರಫ್ ಕೆ.ಸಿ.ರೋಡ್, ನಾಗರಿಕ ಹಿತರಕ್ಷಣಾ ವೇದಿಕೆ ಕಾರ್ಯಕರ್ತರಾದ ಟಿ.ಎ.ಟಿ.ಖಾದರ್ ತಲಪಾಡಿ, ಬಿ.ಎಸ್ ಇಸ್ಮಾಯಿಲ್, ಗ್ರಾ.ಪಂ.ಸದಸ್ಯ ಅಬ್ದುಲ್ ರಹಿಮಾನ್, ಇಲ್ಯಾಸ್ ಕೆ.ಸಿ.ರೋಡ್, ಫಾರೂಕ್ ಕೊಳಂಗರೆ ಮತ್ತಿತರರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಟೋಲ್ ಇನ್‌ಚಾರ್ಜ್ ಆನಂದ ಅವರಿಗೆ ಮನವಿ ಸಲ್ಲಿಸಲಾಯಿತು. ಪಿಆರ್‌ಒ ಭಾಸ್ಕರ್ ಶೆಟ್ಟಿ ಇದ್ದರು.

Similar News