ಮಣಿಪಾಲ ಎಂಐಟಿಯ ಅಟೆಂಡರ್ ಆತ್ಮಹತ್ಯೆ

Update: 2023-02-15 16:07 GMT

ಮಣಿಪಾಲ: ಮಣಿಪಾಲ ಎಂಐಟಿಯ ಸೆಕ್ಯೂರಿಟಿ ವಿಭಾಗದ ಅಟೆಂಡರ್ ಎಂಐಟಿ ಕಟ್ಟಡದ ಮಹಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಫೆ.14ರಂದು ರಾತ್ರಿ ವೇಳೆ ನಡೆದಿದೆ.

ಮೃತರನ್ನು ಮೂಡು ಅಲೆವೂರು ನಿವಾಸಿ ಕೃಷ್ಣಾನಂದ ಶೆಣೈ (50) ಎಂದು ಗುರುತಿಸಲಾಗಿದೆ.

ಇವರ ಪತ್ನಿ 8 ತಿಂಗಳ ಹಿಂದೆ ಮೃತಪಟ್ಟಿದ್ದು, ಆ ಬಳಿಕ ಇವರು ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಇದೇ ಚಿಂತೆಯಲ್ಲಿ ಇವರು ಜೀವನದಲ್ಲಿ ಜೀಗುಪ್ಸೆಗೊಂಡು ಕಟ್ಟಡದ ಎರಡನೇ ಮಹಡಿಯ ರೂಂನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Similar News