ಕೆಂಜಾರಿನಲ್ಲಿ ರಕ್ತದಾನ ಶಿಬಿರ
Update: 2023-02-16 17:33 IST
ಮಂಗಳೂರು: ಶ್ರೀದೇವಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಫೆ.15ರಂದು ರಕ್ತದಾನ ಶಿಬಿರವನ್ನು ಕೆಂಜಾರ್ ಕ್ಯಾಂಪಸ್ನಲ್ಲಿ ಕೆ.ಎಂ.ಸಿ ಆಸ್ಪತ್ರೆಯ ಸಹಯೋಗದಲ್ಲಿ ನಡೆಯಿತು.
ಕೆಎಂಸಿ ಆಸ್ಪತ್ರೆಯ ಮೆಡಿಕಲ್ ಆಫಿಸರ್ ಡಾ.ರಂಜಿತಾರಾವ್ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.
ಈ ಶಿಬಿರದಲ್ಲಿ ಸಂಸ್ಥೆಯ ನಿರ್ದೇಶಕ ಡಾ.ಕೆ.ಇ ಪ್ರಕಾಶ್, ಪ್ರೊ.ಸುಧೀರ್ ಕುಮಾರ್, ಪ್ರೊ.ಆನಂದ್ ಎಸ್ ಉಪ್ಪಾರ್, ಪ್ರೊ.ಸರಸ್ವತಿ ದೇವಾಡಿಗ, ಎನ್ಎಸ್ಎಸ್ ಸಂಯೋಜಕ ಬಾಲರಾಜ್ ಎನ್ ಸಿ ಉಪಸ್ಥಿತರಿದ್ದರು. ಜಾಸ್ಮಿನ್ ಸ್ವಾಗತಿಸಿದರು.