ಬಾರ್ ಒಳಗಡೆಯೇ ಕುಸಿದು ಬಿದ್ದು ಮೃತ್ಯು

Update: 2023-02-22 15:49 GMT

ಶಂಕರನಾರಾಯಣ : ವಿಪರೀತ ಕುಡಿತದ ಚಟ ಹೊಂದಿದ್ದ ವ್ಯಕ್ತಿ ಯೊಬ್ಬರು ಬಾರ್ ಒಳಗಡೆಯೇ ಕುಸಿದು ಬಿದ್ದು ಮೃತಪಟ್ಟ ಘಟನೆ ಫೆ.21ರಂದು ರಾತ್ರಿ ವೇಳೆ ಅಂಪಾರು ಎಂಬಲ್ಲಿ ನಡೆದಿದೆ.

ಮೃತರನ್ನು ಶಂಕರನಾರಾಯಣ ಬೈಲ್ಲೂರು ಜನತಾ ಕಾಲೋನಿಯ ಶೀನ ಪೂಜಾರಿ ಎಂದು ಗುರುತಿಸಲಾಗಿದೆ. ವಿಪರೀತ ಕುಡಿತದ ಚಟ ಹೊಂದಿದ್ದ ಇವರು ಅಂಪಾರು ನಾಗಶ್ರೀ ಬಾರ್ ಒಳಗಡೆ ಅನಾರೋಗ್ಯದಿಂದ ಕುಸಿದು ಬಿದ್ದರು. ತೀವ್ರವಾಗಿ ಅಸ್ವಸ್ಥಗೊಂಡ ಇವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿ ಯಾಗದೆ ಮೃತಪಟ್ಟರು.

ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Similar News