ಧರಣಿ ನಡೆಸಿದರೆ ದಂಡ: ಹೊಸ ನಿಯಮವನ್ನು ಹಿಂಪಡೆದ ಜೆಎನ್‌ಯು

Update: 2023-03-02 18:20 GMT

ಹೊಸದಿಲ್ಲಿ: ಜವಾಹರ್‌ಲಾಲ್ ನೆಹರೂ ವಿಶ್ವವಿದ್ಯಾನಿಲಯದ ಕ್ಯಾಂಪಸ್‌ನಲ್ಲಿ ಹಿಂಸಾಚಾರ ಹಾಗೂ ಧರಣಿ ನಡೆಸಿದರೆ ೫೦ ಸಾವಿರ ರೂಪಾಯಿ ವರೆಗೆ ದಂಡ ವಿಧಿಸುವ ಹೊಸ ನಿಯಮವನ್ನು  ಹಿಂಪಡೆಯಲಾಗಿದೆ ಎಂದು ಜವಾಹರ್‌ಲಾಲ್ ನೆಹರೂ ವಿಶ್ವವಿದ್ಯಾನಿಲಯದ ಕುಲಪತಿ ಗುರುವಾರ ತಿಳಿಸಿದ್ದಾರೆ.

‘‘ಅಂತಹ ಸುತ್ತೋಲೆ ಬಗ್ಗೆ ನನಗೆ ತಿಳಿದಿರಲಿಲ್ಲ. ನಾನು ಯಾವುದೋ ಅಂತರ ರಾಷ್ಟ್ರೀಯ ಸಮ್ಮೇಳನದ ಹಿನ್ನೆಲೆಯಲ್ಲಿ ಹುಬ್ಬಳಿಯಲ್ಲಿ ಇದ್ದೆ. ದಾಖಲೆಗಳನ್ನು ಬಿಡುಗಡೆ ಮಾಡುವ ಮುನ್ನ  ಮುಖ್ಯ ಮೇಲ್ವಿಚಾರಕರು ನನ್ನನ್ನು ಸಂಪರ್ಕಿಸಿರಲಿಲ್ಲ. ಈ ರೀತಿಯ ದಾಖಲೆಗಳನ್ನು ರೂಪಿಸಲಾಗಿದೆ ಎಂದು ನನಗೆ ತಿಳಿದಿಲ್ಲ. ಪತ್ರಿಕೆಗಳ ಮೂಲಕ ಈ ದಾಖಲೆಗಳ ಕುರಿತು ನನಗೆ ತಿಳಿಯಿತು.   ಇದಕ್ಕಾಗಿಯೇ ನಾನು ಅದನ್ನು ಹಿಂಪಡೆದುಕೊಂಡೆೆ’’ ಎಂದು ಕುಲಪತಿ ಶಾಂತಿಶ್ರೀ ಪಂಡಿತ್ ಅವರು ಹೇಳಿದ್ದಾರೆ.

Similar News