×
Ad

ಎಸ್‌ವೈಎಸ್ ಉಡುಪಿ ಜಿಲ್ಲಾಧ್ಯಕ್ಷರಾಗಿ ಕಲ್ಕಟ್ಟ ರಝ್ವಿ ಆಯ್ಕೆ

Update: 2023-03-04 19:44 IST

ಉಡುಪಿ: ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ (ಎಸ್.ವೈ.ಎಸ್.) ಉಡುಪಿ ಜಿಲ್ಲಾ ಕೌನ್ಸಿಲ್ ಸಭೆಯು ಕಟಪಾಡಿ, ಚೊಕ್ಕಾಡಿ ಜಾಮೀಯ ಮಸೀದಿ ಸಭಾಂಗಣದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಮುಂದಿನ ಎರಡು ವರ್ಷಗಳ ಪದಾಧಿಕಾರಿಗಳನ್ನು ಆರಿಸಲಾಯಿತು. ಅಧ್ಯಕ್ಷರಾಗಿ ಕೆ.ಎ.ಅಬ್ದುಲ್ ರಹ್ಮಾನ್ ರಝ್ವಿ ಕಲ್ಕಟ್ಟ, ಪ್ರಧಾನ ಕಾರ್ಯದರ್ಶಿ ಅಡ್ವಕೇಟ್ ಇಲ್ಯಾಸ್ ನಾವುಂದ, ಕೋಶಾಧಿಕಾರಿ ಬಶೀರ್ ಉಸ್ತಾದ್ ಮಜೂರು, ಉಪಾಧ್ಯಕ್ಷರಾಗಿ ಅಬ್ದುಲ್ಲಾ ಸೂಪರ್ ಸ್ಟಾರ್ ಕಾಪು, ಕಾರ್ಯದರ್ಶಿಗಳಾಗಿ ಅಬ್ದುಲ್ಲತೀಫ್ ಫಾಳಿಲಿ ನಾವುಂದ(ದಅ್ವಾ), ಹುಸೈನ್ ಪಡುಕೆರೆ (ಸಂಘಟನೆ), ಅಬ್ದುಲ್ಲತೀಫ್ ಸಖಾಫಿ ಕೋಡಿ(ಸಾಂತ್ವನ), ಸಲೀಂ ಪಕೀರ್ಣಕಟ್ಟೆ(ಇಸಾಬಾ), ಉಮರ್ ಪುತ್ತಿಗೆ(ಸೋಷಿಯಲ್), ಶರೀಫ್ ಸಅದಿ ಕಿಲ್ಲೂರು ಬಂಗ್ಳೆಗುಡ್ಡೆ(ಕಲ್ಚರಲ್), ಅಬ್ದುಲ್ ಹಮೀದ್ ಪಡುಬಿದ್ರೆ (ಮೀಡಿಯಾ ಕನ್ವೀನರ್) ಆಯ್ಕೆಯಾದರು.

ಕಾರ್ಯಕಾರಿ ಸದಸ್ಯರಾಗಿ ಅಡ್ವಕೇಟ್ ಹಂಝತ್ ಹೆಜಮಾಡಿ, ಅಬೂಬಕರ್ ಮುಸ್ಲಿಯಾರ್ ಹೆಜಮಾಡಿ, ಸುಲೈಮಾನ್ ಸಅದಿ ಹೊಸ್ಮಾರ್, ದಾವೂದ್ ಬಂಗ್ಳೆಗುಡ್ಡೆ, ಶಾಬಾನ್ ಹಾಜಿ ಉಡುಪಿ, ಅಬ್ದುಲ್ ರಝಾಕ್ ಮುಸ್ಲಿಯಾರ್ ಗುಂಡ್ಮಿ, ನಈಮ್ ಕಟಪಾಡಿ, ಇಬ್ರಾಹೀಂ ಮಾಣಿಕೊಳಲು, ಮನ್ಸೂರ್ ಕೋಡಿ, ಸ್ವಾದಿಕ್ ಮಾವಿನಕಟ್ಟೆ, ಸಿದ್ದೀಕ್ ಮಾಸ್ಟರ್  ಹಳವಲ್ಲಿ, ಶಬೀರ್ ಸಖಾಫಿ, ಅಬ್ದುಲ್ ಮಜೀದ್ ಹನೀಫಿ ಬೆಳಪು, ಹನೀಫ್ ಕನ್ನಂಗಾರ್, ಸಯ್ಯದ್ ಎ.ಕೆ. ಪಡುಬಿದ್ರೆ, ಬಶೀರ್ ತೌಫೀಕ್ ನಾವುಂದ, ಮುಸ್ತಫಾ ಬಡಾಕೆರೆ ಅವರನ್ನು ಆರಿಸಲಾಯಿತು.

ನಿಕಟಪೂರ್ವ ಜಿಲ್ಲಾಧ್ಯಕ್ಷ ಅಡ್ವಕೇಟ್ ಹಂಝತ್ ಹೆಜಮಾಡಿ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಉಪಾಧ್ಯಕ್ಷ ಸಯ್ಯಿದ್ ಜಾಫರ್ ಸಖಾಫ್ ತಂಳ್ ಉಧ್ಘಾಟಿಸಿದರು. ಅಬ್ದುಲ್ ರಹ್ಮಾನ್ ರಝ್ವಿ ಕಲ್ಕಟ್ಟ ಸ್ವಾಗತಿಸಿ ಅಡ್ವಕೇಟ್ ಇಲ್ಯಾಸ್ ವಂದಿಸಿದರು. 

Similar News