ಆಧುನಿಕತೆಯ ಪರಿವರ್ತನೆ ಕೊರಗರ ಅಸ್ತಿತ್ವಕ್ಕೆ ಅಪಾಯ: ಬಾಬು ಕೊರಗ

Update: 2023-03-06 14:49 GMT

ಶಿರ್ವ : ಆಧುನಿಕತೆಯ ಪರಿವರ್ತನೆಯ ಗಾಳಿಯಿಂದ ಕೊರಗ ಸಮಾಜದ ಭಾಷೆ, ಸಂಸ್ಕೃತಿ, ಕುಲಕಸುಬು ನಶಿಸುವುದರೊಂದಿಗೆ ಕೊರಗರ ಅಸ್ತಿತ್ವ ಇಲ್ಲವಾಗುವ ಕಾಲ ಸನ್ನಿಹಿತವಾಗುತ್ತಿದೆ. ಕೊರಗರು ಈ ನೆಲದ ಮಕ್ಕ ಳಾಗಿದ್ದು, ಅವರ ಭಾಷೆ, ಸಂಸ್ಕೃತಿ, ಪರಂಪರೆ ಉಳಿಸುವ ನಿಟ್ಟಿನಲ್ಲಿ ಸಮಾಜದ ಇತಿಹಾಸ ವನ್ನು ಯುವಕರು ದಾಖಲಿಸಿಕೊಂಡು ಸಮುದಾಯ ಅಸ್ತಿತ್ವದಲ್ಲಿದೆ ಎಂಬುದನ್ನು ಜಗತ್ತಿಗೆ ಸಾರಬೇಕಾಗಿದೆ ಎಂದು ಕೊರಗ ಸಮುದಾಯದ ಹಿರಿಯ ಸಂಘಟಕ, ಸಾಹಿತಿ ಪಾಂಗಾಳ ಬಾಬು ಕೊರಗ ಹೇಳಿದ್ದಾರೆ.

ಬೆಳ್ಳೆ ಗ್ರಾಮ ಪಂಚಾಯತ್, ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕಾಪು ತಾಲೂಕು ಘಟಕ ಮತ್ತು ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಮುಂಚಿಕಾಡು (ಪಾಂಬೂರು) ಕೊರಗರ ಬಲೆಪುವಿ ನಲ್ಲಿ ರವಿವಾರ ನಡೆದ ಕೊರ್ರೆನ ಕೊರಲ್- ಕೊರಗರ ನೆಲಮೂಲ ಪರಂಪರೆ, ಭಾಷೆಯ ಹೊಳಹು ಕಾರ್ಯಕ್ರಮದಲ್ಲಿ ಭಾಗವಹಿಸಿ ಕೊರ್ರೆರ್ ಈ ಞಲತ ಕುಚೇರ್ಲು(ಕೊರಗರು ಈ ನೆಲದ ಮಕ್ಕಳು) ಕುರಿತು ಉಪನ್ಯಾಸ ನೀಡಿದರು.

ಪಾಂಗಾಳ ಕೊರಗರ ಬಲೆಪುವಿನ ಗುರಿಕಾರ ವಸಂತ ಕೊಳಲು ವಾದನದ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮುಂಚಿಕಾಡು (ಪಾಂಬೂರು) ಕೊರಗರ ಬಲೆಪುವಿನ ಕಮಲ ಮತ್ತು ಸುಂದರ ಟಿ.ತೀಪೆ ಪಟ್ನದು ಜೇನು ನೀಡಿ ಜೇನ ಹಬ್ಬ ನೆರವೇರಿಸಿದರು.

ಮುಖ್ಯ ಅತಿಥಿಯಾಗಿ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಮಾತನಾಡಿ, ಕೊರಗ ಜನಾಂಗದ ಭಾಷೆ ಕಣ್ಮರೆಯಾಗುವುದರಂದಿಗೆ ಸಂಸ್ಕೃತಿಯ ಬೇರುಗಳು ಸಡಿಲವಾಗು ತ್ತಿವೆ. ಅಳಿವಿನಂಚಿನಲ್ಲಿರುವ ಭಾಷೆಯನ್ನು ಉಳಿಸಿಕೊಳ್ಳುವುದರ ಮೂಲಕ ನಮ್ಮ ಸಂಸ್ಕೃತಿಯನ್ನು ಉಳಿಸಬೇಕಾ ಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಹಿರಿಯ ಸಂಘಟಕ, ಸಾಹಿತಿ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪಾಂಗಾಳ ಬಾಬು ಕೊರಗ ಅವರನ್ನು ಸಮ್ಮಾನಿಸಲಾಯಿತು. ಬೆಳ್ಳೆ ಗ್ರಾಪಂ ಅಧ್ಯಕ್ಷ  ಸುಧಾಕರ ಪೂಜಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ದ್ದರು. ಕಸಾಪ ಜಿಲ್ಲಾ ಭವನ ನಿರ್ಮಾಣ ಸಮಿತಿಯ ಅಧ್ಯಕ್ಷ ದೇವದಾಸ್ ಹೆಬ್ಬಾರ್, ಬೆಳ್ಳೆ ಗ್ರಾಪಂ ಸದಸ್ಯೆ ಅಮಿತಾ ವೇದಿಕೆಯಲ್ಲಿದ್ದರು.

ಕನ್ನಡ ಸಾಹಿತ್ಯ ಪರಿಷತ್ ಕಾಪು ಘಟಕದ ಅಧ್ಯಕ್ಷ ಬಿ.ಪುಂಡಲೀಕ ಮರಾಠೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಬೆಳ್ಳೆ ಗ್ರಾಪಂ ಸದಸ್ಯರಾದ ಹರೀಶ್ ಶೆಟ್ಟಿ, ರಾಜೇಂದ್ರ ಶೆಟ್ಟಿ, ಸಂತೋಷ್ ಕುಲಾಲ್, ಸಾಹಿತಿ ರಿಚರ್ಡ್ ದಾಂತಿ, ನ್ಯಾಯವಾದಿ ಸಂತೋಷ್ ಕುಮಾರ್ ಮೂಡುಬೆಳ್ಳೆ, ಪ್ರಕಾಶ್ ನೊರೊನ್ಹಾ ಪಾಂಬೂರು, ಶ್ರೀರಾಮ ದಿವಾಣ, ಬೆಳ್ಳೆ ಗ್ರಾಪಂ ಲೆಕ್ಕಾಧಿಕಾರಿ ಸದಾನಂದ ಪೂಜಾರಿ, ಕಸಾಪ ಕಾಪು ಘಟಕದ ಸಂಘಟನಾ ಕಾರ್ಯದರ್ಶಿ ದೀಪಕ್ ಬೀರ, ಸದಸ್ಯರಾದ ದೇವದಾಸ್ ಪಾಟ್ಕರ್ ಮುದರಂಗಡಿ ಮೊದಲಾದವರು ಉಪಸ್ಥಿತರಿದ್ದರು.

ಬೆಳ್ಳೆ ಗ್ರಾಪಂ ಅಭಿವೃದ್ಧಿ ಅಧಿಕಾರಿ ಸುಧಾಕರ ಶೆಟ್ಟಿ ಸ್ವಾಗತಿಸಿದರು. ಕಸಾಪ ಕಾರ್ಯದರ್ಶಿ ಶಿಕ್ಷಕ ನೀಲಾನಂದ ನಾಯ್ಕ್ ಕಾರ್ಯಕ್ರಮ ನಿರೂಪಿಸಿದರು. ಕಸಾಪ ಕಾರ್ಯದರ್ಶಿ ಹಾಗೂ ಕಾರ್ಯಕ್ರಮ ಸಂಯೋಜಕ ಅಶ್ವಿನ್ ಲಾರೆನ್ಸ್ ಮೂಡುಬೆಳ್ಳೆ ವಂದಿಸಿದರು.

ಜಾನಪದ ಪರಂಪರೆಯ ಪ್ರಾತಿಕ್ಷಿಕೆ

ಕೊರಗರ ಜಾನಪದ ಪರಂಪರೆಯಲ್ಲಿ ಹಾಸು ಹೊಕ್ಕಾದ ವಿವಿಧ ಪ್ರಾತಿಕ್ಷಿಕೆ ಕಾರ್ಯಕ್ರಮದಲ್ಲಿ ಕೊರ್ರೆನ ಪಾಟು-ಕೊರಗರ ಹಾಡು, ಜಾನಪದ ಪರಂಪರೆಯ ಪಾಡ್ದಾನಗಳನ್ನು ಪ್ರಸ್ತುತ ಪಡಿಸಲಾಯಿತು.

ಕೊರ್ರೆನ ಕೊನ್ಕೆ -ಕೊರಗರ ನೃತ್ಯ, ತುಳು ನೃತ್ಯ, ಸಾಪ್ರದಾಯಿಕ ಡೋಲು ಕುಣಿತ, ವಿವಾಹದ ಮುನ್ನಾದಿನ ಮನೆಯಂಗಳದಲ್ಲಿ ವಾಡಿಕೆಯಂತೆ ಕುಟುಂಬ ಸಪರಿವಾರದವರು ಡೋಲು ಸಹಿತ ಇತರ ಪರಿಕರಕಗಳ ವಾದನದಲ್ಲಿ ನಲಿದು ಕುಪ್ಪಳಿಸುವ ನೃತ್ಯ, ಅರಕಜಬ್ಬೆನ ಕಥಾವಾಚನ ನಡೆಯಿತು. ಅನಾದಿ ಕಾಲ ದಿಂದಲೂ ಪರಂಪರಾಗತವಾಗಿ ಬಂದ ಕುಲಕಸುಬುಗಳಾದ ಚಟಿಕುರೆ, ಕುರೆ, ಕಡ್ಡಯಿ, ಕೊರಲ್, ಬಲ್ಲ್ ತಯಾರಿಕೆಯ ಪ್ರಾತಿಕ್ಷಿಕೆ ಜೊತೆಗೆ ವೈವಿಧ್ಯಮಯ ಕಾರ್ಯಕ್ರಮಗಳು ಜರುಗಿದವು.

Similar News