ತೆಂಕನಿಡಿಯೂರು ಕಾಲೇಜಿಗೆ 9 ರ್ಯಾಂಕ್, 5 ಚಿನ್ನದ ಪದಕ, 9 ನಗದು ಬಹುಮಾನ
ಉಡುಪಿ, ಮಾ.9: ತೆಂಕನಿಡಿಯೂರಿನ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರವು ಮಂಗಳೂರು ವಿಶ್ವವಿದ್ಯಾನಿಲಯ ನಡೆಸಿದ 2021-22ನೇ ಸಾಲಿನಲ್ಲಿ ಸ್ನಾತಕೋತ್ತರ ಪರೀಕ್ಷೆಗಳಲ್ಲಿ 8 ರ್ಯಾಂಕ್ ಹಾಗೂ ಪದವಿ ವಿಭಾಗದಲ್ಲಿ ಒಂದು ರ್ಯಾಂಕ್ ಗಳಿಸಿ ವಿಶೇಷ ಸಾಧನೆ ಮಾಡಿದೆ.
ಪ್ರಕಾಶ್ ಕೆ. ಇವರು ಎಂ.ಎ. ಇತಿಹಾಸದಲ್ಲಿ ಪ್ರಥಮ ರ್ಯಾಂಕ್ ಪಡೆದಿದ್ದರೆ, ಎಂ.ಎ. ಸಮಾಜಶಾಸ್ತ್ರದಲ್ಲಿ ರಕ್ಷಿತಾ ಪ್ರಥಮ ರ್ಯಾಂಕ್ ಗಳಿಸಿ ದ್ದಾರೆ. ಇಂಗ್ಲೀಷ್ ಎಂ.ಎ.ಯಲ್ಲಿ ಕೋಲಿನ್ ಆಂಟೋನಿತಾ ಲೋಬೋ ಪ್ರಥಮ ರ್ಯಾಂಕ್ ಸಂಪಾದಿಸಿದ್ದಾರೆ.
ಇನ್ನು ವಾಣಿಜ್ಯಶಾಸ್ತ್ರದ ಎಂ.ಕಾಂ.ನಲ್ಲಿ ರೈನಾ ಡಿಸೋಜ ದ್ವಿತೀಯ ರ್ಯಾಂಕ್, ನವ್ಯ ಅಂಚನ್ ಆರನೇ ರ್ಯಾಂಕ್, ರೀಮಾ ಸೀಮಾ ಎಂಟನೇ ರ್ಯಾಂಕ್, ಅನುಷಾ ಶಂಕರ ನಾಯ್ಕ್ ಒಂಭತ್ತನೇ ರ್ಯಾಂಕ್ ಹಾಗೂ ಪ್ರಣೀತ ಹತ್ತನೇ ರ್ಯಾಂಕ್ ಗಳಿಸಿದ್ದಾರೆ. ಪದವಿ ವಿಭಾಗದ ಬಿ.ಎಸ್ಡಬ್ಲ್ಯೂನಲ್ಲಿ ದಿವ್ಯಾ ತೃತೀಯ ರ್ಯಾಂಕ್ ಪಡೆದಿದ್ದಾರೆ ಎಂದು ಕಾಲೇಜು ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಚಿನ್ನದ ಪದಕಗಳು: ಸಮಾಜಶಾಸ್ತ್ರ ವಿಭಾಗದಲ್ಲಿ ರಕ್ಷಿತಾ ಜಯರಾಜ್ ಬಳ್ಳಾಲ್ ಮೆಮೋರಿಯಲ್ ಚಿನ್ನದ ಪದಕ, ಪ್ರೊ. ಜೋಗನ್ ಶಂಕರ್ ಚಿನ್ನದ ಪದಕ, ವಿಮೋಚನಾ ದೇವದಾಸಿ ಪುನರ್ವಸತಿ ಸಂಘ ಅಥಣಿ ಚಿನ್ನದ ಪದಕ ಸೇರಿದಂತೆ ಒಟ್ಟು 3 ಚಿನ್ನದ ಪದಕಗಳನ್ನು ಪಡೆದಿದ್ದಾರೆ.
ಇತಿಹಾಸ ವಿಭಾಗದಲ್ಲಿ ಪ್ರಥಮ ಬಹುಮಾನ ಪಡೆದ ಪ್ರಕಾಶ ಕೆ. ಇವರು ದಿ.ಡಾ.ಗುರುರಾಜ ಭಟ್ಟ ಚಿನ್ನದ ಪದಕ, ದಿ.ಡಾ.ಪಾದೂರು ಗುರುರಾಜ ಭಟ್ ಸ್ಮಾರಕ ಚಿನ್ನದ ಪದಕ ಸೇರಿ ಒಟ್ಟು 2 ಚಿನ್ನದ ಪದಕಗಳನ್ನು ಪಡೆದಿದ್ದಾರೆ.
ನಗದು ಬಹುಮಾನ: ಕನ್ನಡ ವಿಭಾಗದಲ್ಲಿ ಸ್ವರ್ಣ ಇವರು ಪೆರುವಾಯ ಸುಬ್ಬಯ್ಯ ಶೆಟ್ಟಿ ಮೆಮೋರಿಯಲ್ ನಗದು ಬಹುಮಾನ ಪಡೆದಿರುತ್ತಾರೆ.ಆಂಗ್ಲ ಭಾಷಾ ವಿಭಾಗದ ಕೋಲಿನ್ ಆಂಟೋನಿತಾ ಲೋಬೋ ಅವರು ಪದ್ಮನಾಗಪ್ಪ ಶಾಸ್ತ್ರಿ ನಗದು ಬಹುಮಾನ, ಲವ್ಲಿಲಾ ಮತ್ತು ಜೆ.ಬಿ.ಲೋಬೋ ಪ್ರಭು ಸಾಹಿತ್ಯ ನಗದು ಬಹುಮಾನ, ಹಳೆ ವಿದ್ಯಾರ್ಥಿ ನಗದು ಬಹುಮಾನ ಪಡೆದಿದ್ದಾರೆ.
ಆಂಗ್ಲ ಭಾಷಾ ವಿಭಾಗದ ರವೀನಾ ಸಿ. ಪೂಜಾರಿ ಇವರು ಶ್ರೀಮತಿ ವಸಂತ ಎಸ್. ಅನಂತ ನಾರಾಯಣ ಮತ್ತು ಪ್ರೊ. ಎಸ್. ಅನಂತನಾರಾಯಣ ನಗದು ಬಹುಮಾನ ಪಡೆದಿದ್ದಾರೆ.
ಇತಿಹಾಸ ವಿಭಾಗದ ಪ್ರಕಾಶ್ ಕೆ. ಇವರು ಡಾ. ಪಿ. ಗುರುರಾಜ ಭಟ್ಟ ಮೆಮೋರಿಯಲ್ ನಗದು ಬಹುಮಾನ ಹಾಗೂ ಆಬ್ರೆ ಡಿಸೋಜಾ ಚಾರಿಟೇಬಲ್ ಪೌಂಡೇಶನ್ ನಗದು ಬಹುಮಾನ ಪಡೆದಿದ್ದಾರೆ ಎಂದು ಸಂಸ್ಥೆಯ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.