ಮುನ್ನೂರು ಗ್ರಾಪಂನ ನೂತನ ಕಟ್ಟಡಕ್ಕೆ ಶಿಲಾನ್ಯಾಸ

Update: 2023-03-20 11:01 GMT

ಉಳ್ಳಾಲ, ಮಾ.20: ಮುನ್ನೂರು ಗ್ರಾಮ ಪಂಚಾಯತ್ ನೂತನ ಕಟ್ಟಡಕ್ಕೆ ಶಿಲಾನ್ಯಾಸ ಕಾರ್ಯಕ್ರಮ ಕುತ್ತಾರ್ ನಲ್ಲಿ ಸೋಮವಾರ ನಡೆಯಿತು.

ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಯು.ಟಿ.ಖಾದರ್, ಗ್ರಾಮಾಂತರ ಪ್ರದೇಶ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಗಿದೆ. ಮುನ್ನೂರು ಗ್ರಾಮ ಪಂಚಾಯತ್ ಅಧೀನದಲ್ಲಿ ವಾಣಿಜ್ಯ ಸಂಕೀರ್ಣ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಲಾಗಿದೆ ಎಂದು ಹೇಳಿದರು.

ಮುನ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷ ವಿಲ್ಫ್ರೆಡ್ ಡಿಸೋಜ, ಕಾರ್ಯದರ್ಶಿ ಶಾಂತಿ, ಉಪಾಧ್ಯಕ್ಷ ರಾಜೇಶ್ವರಿ, ಹಸನಬ್ಬ, ವನಿತಾ ಶೆಟ್ಟಿ, ಕವಿತಾ ಚಂದ್ರಕಲಾ, ಪುಷ್ಪಾ ಅಂಚನ್, ಕೇಶವ, ಮಹಾಬಲ ದಬ್ಬೇಲ್, ನವೀನ್ ಡಿಸೋಜ, ಕಿರಣ್, ರೆಹನಾ ಬಾನು, ಮಾಜಿ ಅಧ್ಯಕ್ಷ ಐಸಮ್ಮ, ಮಾಜಿ ಸದಸ್ಯ ಉಸ್ಮಾನ್ ಫಯಾಝ್ ಎಂ., ಇಸ್ಮಾಯೀಲ್, ತಾಪಂ ಮಾಜಿ ಸದಸ್ಯ ವಿಲ್ಮಾ, ವೆಂಕಪ್ಪ, ಜೀವನ್ ಪೆರಾವೊ ವಾಝಿ ಡಿಸೋಜ ಗ್ರೇಸಿ ಡಿಸೋಜ, ಪ್ಲೋಸಿ ಡಿಸೋಜ, ಲಕ್ಷ್ಮಣ್, ಸುರೇಶ್ ಭಟ್ನಾಗರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Similar News