ಉಳ್ಳಾಲ ದರ್ಗಾಕ್ಕೆ ಕೇಂದ್ರ ಹಜ್ಜ್ ಕಮಿಟಿ ಚೆಯರ್‌ಮ್ಯಾನ್‌ ಭೇಟಿ

Update: 2023-03-20 18:02 GMT

ಉಳ್ಳಾಲ: ಕೇಂದ್ರ  ಹಜ್ಜ್ ಕಮಿಟಿ ಚೆಯರ್‌ಮ್ಯಾನ್‌ ಅಬ್ದುಲ್ಲ ಕುಟ್ಟಿಯವರು  ರವಿವಾರ ಉಳ್ಳಾಲ ದರ್ಗಾಕ್ಕೆ ಭೇಟಿ ನೀಡಿದರು.

ಈ ಸಂದರ್ಭ ದರ್ಗಾ ಅಧ್ಯಕ್ಷ ಬಿ.ಜಿ ಹನೀಫ್ ಹಾಜಿಯವರು ಹಜ್ಜ್ ಕಮಿಟಿ ಚೆಯರ್‌ಮ್ಯಾನ್‌ ಅಬ್ದುಲ್ಲ ಕುಟ್ಟಿಯವರನ್ನು  ಸ್ವಾಗತಿಸಿದರು.  ದರ್ಗಾ ಸಮಿತಿ ವತಿಯಿಂದ ಅವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭ ದರ್ಗಾ ಪ್ರಧಾನ ಕಾರ್ಯದರ್ಶಿ ಪಿ.ಎಸ್ ಶಿಹಾಬುದ್ದೀನ್ ಸಖಾಫಿ, ಉಪಾಧ್ಯಕ್ಷ ಯು.ಎಮ್ ಅಶ್ರಫ್ ಅಹ್ಮದ್ ರೈಟ್ವೇ, ಕೋಶಾಧಿಕಾರಿ ನಾಝಿಮ್ ರಹ್ಮಾನ್, ಜತೆ ಕಾರ್ಯದರ್ಶಿ ಮುಸ್ತಫ ಮದನಿನಗರ, ಇಸಾಕ್  ಮೇಲಂಗಡಿ ಮತ್ತು ಸಮಿತಿ ಸದಸ್ಯರು ಉಪಸ್ಥಿತರಿದ್ದರು.

Similar News