ಚುನಾವಣೆ ಹಿನ್ನೆಲೆ: ಪೊಲೀಸರಿಂದ ರೂಟ್ ಮಾರ್ಚ್
Update: 2023-04-01 15:01 GMT
ಮಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಧೈರ್ಯ ತುಂಬುವುದರ ಭಾಗವಾಗಿ ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ‘ರೂಟ್ ಮಾರ್ಚ್’ ನಡೆಸಲಾಯಿತು.
ನಗರದ ಮಂಗಳಾದೇವಿ, ಅತ್ತಾವರ ಹಾಗೂ ಉಳ್ಳಾಲ ಮತ್ತಿತರ ಕಡೆಗಳಲ್ಲಿ ‘ರೂಟ್ ಮಾರ್ಚ್’ ನಡೆಸಿದ ಪೊಲೀಸರು ನಿಷ್ಪಕ್ಷಪಾತ ಚುನಾವಣೆ ನಡೆಸಲು ಸಾರ್ವಜನಿಕರ ಸಹಕಾರ ಕೋರಿದರಲ್ಲದೆ ನಿರ್ಭೀತಿಯಿಂದ ಮತ ಚಲಾಯಿಸಲು ಮುಂದಾಗಬೇಕು ಎಂಬ ಸಂದೇಶ ರವಾನಿಸಿದರು.