ಕೇರಳ: ರೈಲಿಗೆ ಬೆಂಕಿ ಹಚ್ಚಿದ ಪ್ರಕರಣ; ಆರೋಪಿ ವಿರುದ್ಧ ಯುಎಪಿಎ ಅಡಿ ಪ್ರಕರಣ ದಾಖಲು
Update: 2023-04-17 18:26 GMT
ತಿರುವನಂತಪುರ, ಎ. 17: ಈ ತಿಂಗಳ ಆರಂಭದಲ್ಲಿ ಮೂವರು ಸಾವನ್ನಪ್ಪಲು ಹಾಗೂ 8 ಮಂದಿ ಗಾಯಗೊಳ್ಳಲು ಕಾರಣವಾದ ಕೋಝಿಕ್ಕೋಡ್ನಲ್ಲಿ ರೈಲಿಗೆ ಬೆಂಕಿ ಹಚ್ಚಿದ ಪ್ರಕರಣದ ಆರೋಪಿಯ ವಿರುದ್ಧ ಕೇರಳ ಪೊಲೀಸರು ಕಾನೂನು ಬಾಹಿರ ಚಟುವಟಿಕೆ ತಡೆ ಕಾಯ್ದೆ (ಯುಎಪಿಎ)ಅಡಿ ಪ್ರಕರಣ ದಾಖಲಿಸಿದ್ದಾರೆ.
ಎಪ್ರಿಲ್ 2ರಂದು ಆಲಪ್ಪುಳ-ಕಣ್ಣೂರು ಎಕ್ಸ್ಪ್ರೆಸ್ ರೈಲಿನ ಡಿ1 ಸಂಖ್ಯೆಯ ಬೋಗಿಗೆ ದಹನಕಾರಿ ದ್ರವ ಸುರಿದು ಬೆಂಕಿ ಹಚ್ಚಿದ ಆರೋಪದಲ್ಲಿ ದಿಲ್ಲಿಯ ನಿವಾಸಿಯಾಗಿರುವ ಶಾರುಕ್ ಸೈಫಿಯನ್ನು ಎಪ್ರಿಲ್ 4ರಂದು ಬಂಧಿಸಲಾಗಿತ್ತು. ಸೈಫಿಯನ್ನು ಎಪ್ರಿಲ್ 5ರಂದು ಮಹಾರಾಷ್ಟ್ರದ ರತ್ನಗಿರಿ ನಗರದಲ್ಲಿ ಬಂಧಿಸಲಾಗತ್ತು. ಈಗ ಸೈಫಿ ಕೇರಳ ಪೊಲೀಸರ ಕಸ್ಟಡಿಯಲ್ಲಿ ಇದ್ದಾನೆ.
ಸೈಫಿ ವಿರುದ್ಧ ಕಾನೂನು ಬಾಹಿರ ಚಟುವಟಿಕೆ ತಡೆ ಕಾಯ್ದೆ (ಯುಎಪಿಎ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಕೋಯಿಕ್ಕೋಡ್ ನಗರ ಪೊಲೀಸ್ ಆಯುಕ್ತ ರಾಜ್ಪಾಲ್ ಮೀನಾ ಅವರು ರವಿವಾರ ಹೇಳಿದ್ದಾರೆ.