ಮಂಗಳೂರು: ಮತದಾನ ಅರಿವು ಮೂಡಿಸುವ ಬ್ರೌಷರ್ ಬಿಡುಗಡೆ
ಮಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ದ.ಕ. ಜಿಲ್ಲಾ ಸ್ವೀಪ್ ಸಮಿತಿಯಿಂದ ಮತದಾನದ ಬಗ್ಗೆ ಜನಜಾಗೃತಿ ಮತ್ತು ಅರಿವು ಮೂಡಿಸುವ ಕಾರ್ಯಕ್ರಮಗಳ ಬ್ರೌಷರನ್ನು ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಅತೀಕ್ ಎಲ್.ಕೆ. ಅವರು ಗುರುವಾರ ದ.ಕ.ಜಿಪಂ ವಿಸಿ ಹಾಲ್ನಲ್ಲಿ ಬಿಡುಗಡೆ ಮಾಡಿದರು.
4 ಪುಟಗಳ ಈ ಬ್ರೌಷರ್ನಲ್ಲಿ ಮತದಾನದ ಉದ್ದೇಶಗಳು, ಜಿಲ್ಲೆಯ ಜನಸಂಖ್ಯೆ, ಕಳೆದ ಬಾರಿ ಜಿಲ್ಲೆಯ ೮ ವಿಧಾನಸಭಾ ಚುನಾವಣೆಯಲ್ಲಿ ನಡೆದ ಮತದಾನದ ಶೇಕಡಾವಾರು ಪಟ್ಟಿ, ಜನರಿಗೆ ಸಮಗ್ರ ಮಾಹಿತಿ ನೀಡಲು ರಚಿಸಿದ ವಿವಿಧ ಜಾಗೃತಿ ತಂಡಗಳ ವಿವರ, ಈ ಬಾರಿಯ ವಿಶೇಷ ಆಕರ್ಷಣೆಯಾದ ಸ್ನೇಹಕರ ಮತ್ತು ಆಹ್ಲಾದ ಕರ ಅನುಭವವನ್ನು ನೀಡುವ 9 ವಿಷಯವನ್ನೊಳಗೊಂಡ ಮಾದರಿ ಮತಗಟ್ಟೆಗಳು, ಜಿಲ್ಲಾ ಚುನಾವಣಾ ರಾಯ ಭಾರಿಗಳ ವಿವರ ಹಾಗೂ ಸ್ವೀಪ್ ಸಮಿತಿಯಿಂದ ಹಮ್ಮಿಕೊಂಡ ವಿನೂತನ ಚಟುವಟಿಕೆಗಳ ಛಾಯಾಚಿತ್ರಗಳ ಮಾಹಿತಿಯು ಒಳಗೊಂಡಿವೆ.
ಈ ಸಂದರ್ಭ ಜಿಪಂ. ಸಿಇಒ ಡಾ.ಕುಮಾರ, ಮುಖ್ಯ ಯೋಜನಾಧಿಕಾರಿ ಸಂಧ್ಯಾ ಕೆ.ಎಸ್. ಹಾಗೂ ವಿವಿಧ ಇಲಾ ಖಾಧಿಕಾರಿಗಳು ಉಪಸ್ಥಿತರಿದ್ದರು.