ವ್ಯಕ್ತಿ ನಾಪತ್ತೆ
Update: 2023-05-02 20:23 IST
ಉಡುಪಿ: ಜಿಲ್ಲೆಯ ಅಂಜಾರು ಗ್ರಾಮದ ಕಾಜಾರಗುತ್ತು ಶ್ರೀನಿವಾಸ ನಗರ ನಿವಾಸಿ ವೆಂಕಟರಮಣ ನಾಯಕ್ (50) ಎಂಬವರು ಎ.28ರಂದು ಮನೆಯಿಂದ ಹೊರಗೆ ಹೋದವರು ವಾಪಾಸು ಬಾರದೇ ನಾಪತ್ತೆಯಾಗಿದ್ದಾರೆ.
5ಅಡಿ 3 ಇಂಚು ಎತ್ತರ, ಬಿಳಿ ಮೈಬಣ್ಣ, ಸಾಧಾರಣ ಶರೀರ ಹೊಂದಿದ್ದು, ಕನ್ನಡ, ತುಳು, ಹಿಂದಿ ಹಾಗೂ ಕೊಂಕಣಿ ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಹಿರಿಯಡ್ಕ ಪೊಲೀಸ್ ಠಾಣೆಯ ಉಪನಿರೀಕ್ಷಕರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.