×
Ad

ನದಿಗೆ ಬಿದ್ದು ಯುವಕ ಮೃತ್ಯು

Update: 2023-05-02 20:28 IST

ಮಣಿಪಾಲ, ಮೇ 2: ನದಿಗೆ ಬಿದ್ದು ಯುವಕನೋರ್ವ ಮೃತಪಟ್ಟ ಘಟನೆ ಎ.30ರಂದು ರಾತ್ರಿ ವೇಳೆ ಶೀಂಬ್ರಾ ಸೇತುವೆ ಸಮೀಪ ನಡೆದಿದೆ.

ಮೃತರನ್ನು ಸ್ಥಳೀಯ ನಿವಾಸಿ ಜಯ ಕುಮಾರ್ ಸಾಲಿಯಾನ್ ಎಂಬವರ ಮಗ ಧೀರಜ್ ಜೆ.ಸಾಲಿಯಾನ್(28) ಎಂದು ಗುರುತಿಸಲಾಗಿದೆ.

ಮಂಗಳೂರಿನ ಖಾಸಗಿ ಕಂಪನಿಯಲ್ಲಿ ಸಬ್ ಕಾಂಟ್ರ್ಯಾಕ್ಟರ್ ಆಗಿ ಕೆಲಸ ಮಾಡಿ ಕೊಂಡಿದ್ದ ಇವರು, ಯಾವುದೋ ಕಾರಣಕ್ಕೆ ಸ್ವರ್ಣ ನದಿಯ ಬಳಿ ಹೋದವರು ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದು ಮೃತಪಟ್ಟಿರುವುದಾಗಿ ತಿಳಿದುಬಂದಿದೆ.

ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Similar News