ಕೇಂದ್ರ ಸರಕಾರದ ನೂತನ ಆದೇಶ ʼಸುಪ್ರೀಂಕೋರ್ಟ್‌ನ ಘನತೆಗೆ ಅವಮಾನ ಮಾಡಿದೆʼ: ಕೇಜ್ರಿವಾಲ್‌

Update: 2023-05-20 15:19 GMT

ಹೊಸದಿಲ್ಲಿ: ರಾಜಧಾನಿ ದಿಲ್ಲಿಯಲ್ಲಿ ಅಧಿಕಾರಿಗಳನ್ನು ಯಾರು ನಿಯಂತ್ರಿಸುತ್ತಾರೆ ಎಂಬುವುದರ ಕುರಿತು ವಿಶೇಷ ಆದೇಶ ಹೊರಡಿಸುವ ಮೂಲಕ ಕೇಂದ್ರ ಸರಕಾರವು ಸುಪ್ರೀಂಕೋರ್ಟ್‌ ನ ಘನತೆಯನ್ನು ಅವಮಾನಿಸಿದೆ ಎಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಹೇಳಿಕೆ ನೀಡಿದ್ದಾರೆ.

"ಇದೊಂದು ಅಸ್ಯಕರವಾದ ಅಪಹಾಸ್ಯವಾಗಿದೆ. ಒಂದು ವಾರದೊಳಗಡೆ ಸುಪ್ರೀಂಕೋರ್ಟ್‌ ನೀಡಿದ್ದ ತೀರ್ಪನ್ನು ಅವರು ರದ್ದುಗೊಳಿಸಿದ್ದಾರೆ. ಕೇಂದ್ರ ಸರಕಾರವು ಸುಪ್ರೀಂಕೋರ್ಟ್‌ ಅನ್ನು ಬಹಿರಂಗವಾಗಿ ಪ್ರಶ್ನಿಸುತ್ತಿದೆ. ಇದು ಸುಪ್ರೀಂಕೋರ್ಟ್‌ ಗೆ ಅವಮಾನ ಮತ್ತು ಅದರ ಘನತೆಗೆ ಹಾನಿಯುಂಟು ಮಾಡಿದೆ ಎಂದು ಕೇಜ್ರಿವಾಲ್‌ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. 

ಸುಗ್ರೀವಾಜ್ಞೆಯನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗುವುದು. ಇದು ದೆಹಲಿ ಸರ್ಕಾರದ ಕೆಲಸವನ್ನು ನಿಧಾನಗೊಳಿಸುತ್ತದೆ ಆದರೆ ನಾವು ಮಾಡುತ್ತಿರುವ ಕೆಲಸವನ್ನು ನಿಲ್ಲಿಸುವುದಿಲ್ಲ ಎಂದು ಕೇಜ್ರಿವಾಲ್ ಹೇಳಿದರು,

Similar News