ವಾಲಿಬಾಲ್ ಅಕಾಡೆಮಿ ಉದ್ಘಾಟನೆ: ತರಬೇತಿ ಸಮಾರೋಪ

Update: 2023-05-28 15:12 GMT

ಕುಂದಾಪುರ, ಮೇ 28: ಕುಂದಾಪುರ ವಾಲಿಬಾಲ್ ಅಕಾಡೆಮಿ ಹಾಗೂ ಕುಂದಾಪುರ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಕುಂದಾಪುರ ವಾಲಿಬಾಲ್ ಅಕಾಡೆಮಿಯನ್ನು ಮಾಜಿ ರಾಷ್ಟ್ರಮಟ್ಟದ ವಾಲಿಬಾಲ್ ಆಟಗಾರ ಜಯಾನಂದ ಖಾರ್ವಿ ಕುಂದಾಪುರದ ಗಾಂಧಿ ಮೈದಾನದಲ್ಲಿ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಏಕಲವ್ಯ ಪ್ರಶಸ್ತಿ ವಿಜೇತ ಅಥ್ಲೆಟ್ ಪರಮೇಶ್ವರ ಖಾರ್ವಿ ಉಪ್ಪುಂದ, ಹುಣ್ಸೆಮಕ್ಕಿಯ  ವಾಲಿಬಾಲ್ ಪ್ರೋತ್ಸಾಹಕ ಸಂದೇಶ್ ಜೋಗಿ ಅವರನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಯುವಜನ ಕ್ರೀಡಾಧಿಕಾರಿ ಕುಸುಮಾಕರ್ ಶೆಟ್ಟಿ, ದೈಹಿಕ ಶಿಕ್ಷಕ, ತರಬೇತುದಾರ ಜೀವನ್ ಕುಮಾರ್ ಶೆಟ್ಟಿ, ಕುಂದಾಪುರ ಫ್ರೆಂಡ್ಸ್ ವಾಲಿಬಾಲ್ ಕ್ಲಬ್ ಅಧ್ಯಕ್ಷ ರಮಾನಂದ ಕೆ., ದೈಹಿಕ ಶಿಕ್ಷಕ ಗಣೇಶ್ ಶೆಟ್ಟಿ ಕಟ್ಕೆರೆ, ಗೋಲ್ಡನ್ ಮಿಲ್ಲರ್ ಸ್ಪೋರ್ಟ್ಸ್ ಕ್ಲಬ್ ವಡೇರಹೋಬಳಿ ಅಧ್ಯಕ್ಷ ಕೃಷ್ಣ ಪೂಜಾರಿ, ದೈಹಿಕ ಶಿಕ್ಷಕ ಸತ್ಯಾನಂದ್ ಸಾಲಿನ್ಸ್, ವಾಲಿಬಾಲ್ ಅಕಾಡೆಮಿಯ ಮುಹಮ್ಮದ್ ಸಮೀರ್, ಇಲಿಯಾಸ್ ಬಿ., ಮೆಲ್ವಿನ್ ರೆಬೆಲ್ಲೊ, ಶ್ರೀಧರ್ ಆಚಾರ್, ವಿಖ್ಯಾತ್ ಕಂಡ್ಲೂರ್, ಜೋಯ್ ಜೆ.ಕರ್ವಾಲೋ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಶಿಬಿರಾರ್ಥಿಗಳಿಗೆ ಸಮವಸ್ತ್ರ ವಿತರಿಸಿ ಪಂದ್ಯಾಟಗಳನ್ನು ಏರ್ಪಡಿಸಿ ಪಾರಿತೋಷಕಗಳನ್ನು ವಿತರಿಸಲಾಯಿತು. ಕುಂದಾಪುರ ಪೋಲಿಸ್ ಠಾಣೆಯ ಉಪನಿರೀಕ್ಷಕ  ಈರಯ್ಯ ಬಿ. ಬಹುಮಾನ ವಿತರಿಸಿದರು. 14 ರಿಂದ 19 ವಯಸ್ಸಿನ ಸುಮಾರು 45 ಹುಡುಗರು ತರಬೇತಿಯಲ್ಲಿ ಭಾಗವಹಿಸಿದ್ದರು. ಹನೀಫ್ ವೀಕ್ಷಕ ವಿವರಣೆಗೈದರು. ಇಲ್ಯಾಸ್ ಬಿ. ಕಾರ್ಯಕ್ರಮ ನಿರೂಪಿಸಿದರು.

Similar News