ನದಿಗೆ ಹಾರಿ ಆತ್ಮಹತ್ಯೆ

Update: 2023-05-30 16:20 GMT

ಕೋಟ, ಮೇ 30: ಅನಾರೋಗ್ಯದಿಂದ ನರಳುತಿದ್ದ ವೃದ್ಧರೊಬ್ಬರು ಇದರಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಗಾವಳಿಯ ಹೊಳೆಗೆ ಹಾರಿ ತ್ಮಹತ್ಯೆ ಮಾಡಿಕೊಂಡ ಘಟನೆ ಗಾವಳಿಯಿಂದ ವರದಿಯಾಗಿದೆ.

ಕುಂದಾಪುರ ತಾಲೂಕು ಯಡಾಡಿ-ಮತ್ಯಾಡಿ ಗರಾಮದ ಬೆಮ್ಮರ್ಕಿ ನಿವಾಸಿ  ನಂದಿ ಕುಲಾಲ್ (73) ಎಂಬವರು ಅನಾರೋಗ್ಯದಿಂದ ಬಳಲುತಿದ್ದು ಗಿಡ ಮೂಲಿಕೆಗಳ ಔಷಧಿ ಚಿಕಿತ್ಸೆಯಲ್ಲಿದ್ದರು. ಮೇ 28ರಂದು ಮನೆಯಿಂದ ಹೊರಗೆ ಹೋದ ಅವರು ಗಾವಳಿಯಲ್ಲಿರುವ ಜಮೀನು ನೋಡಲು ಹೋಗಿರಬಹುದೆಂದು ಮನೆಯವರು ಭಾವಿಸಿದ್ದರು.

ಆದರೆ ಮೇ 29ರಂದು ಬೆಳಗ್ಗೆಯೂ ಅವರು ಮರಳಿ ಬಾರದಾಗ ಗಾವಳಿಗೆ ಹೋಗಿ ಹುಡುಕಾಡಿದಾಗ ಅವರು ಗಾವಳಿ ಹೊಳೆಯತ್ತ ಹೋಗಿರುವುದು ಗೊತ್ತಾಗಿ ಹೊಳೆಯಲ್ಲಿ ಹುಡುಕಾಡಿದಾಗ ವೆಂಟಡ್ ಡ್ಯಾಮ್‌ನಲ್ಲಿ ಅವರ ಮೃತದೇಹ ತೇಲುವ ಸ್ಥಿತಿಯಲ್ಲಿ ಕಂಡುಬಂದಿತ್ತು. ಈ ಬಗ್ಗೆ ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Similar News