ಹಿರಿಯ ದೈವನರ್ತಕ ಸೇಸಪ್ಪ ಪಂಬದ ನಿಧನ

Update: 2023-05-30 17:21 GMT

ಕೊಣಾಜೆ: ಹಿರಿಯ ದೈವನರ್ತಕರಾಗಿ ಗುರುತಿಸಿದ್ದ ಸೇಸಪ್ಪ ಪಂಬದ ಮಂಜನಾಡಿ(72) ಅವರು ಮಂಗಳವಾರ ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು.

ಇವರು  ದಿ| ವೆಂಕಪ್ಪ ಪಂಬದರ ಪುತ್ರರಾಗಿದ್ದು, ಇವರ ಮನೆತನವು  ಪೂರ್ವಜರ ಕಾಲದಿಂದಲೇ ಮಂಜನಾಡಿ ಶ್ರೀ ಮಲರಾಯ ಬಂಟ ದೈವಸ್ಥಾನ ಮಾತ್ರವಲ್ಲದೆ ಉಳ್ಳಾಲ ಬಂಡಿಕೊಟ್ಯ, ತಲಪಾಡಿ ಅಲಂಕಾರಗುಡ್ಡೆ, ಉಚ್ಚಿಲಕೋಟೆ, ಅತ್ತಾವರ ಪೆರ್ಗಡೆಬೊಟ್ಟಿ ಸ್ಥಾನ ಹೀಗೆ ಹಲವಾರು ಕ್ಷೇತ್ರಗಳಲ್ಲಿ ದೈವನರ್ತನಾ ಸೇವೆಯನ್ನು ಮಾಡುತ್ತಿದ್ದರು.  ಮಂಜನಾಡಿ ಶ್ರೀ ಮಲರಾಯ ದೈವದ 'ರಾಮು' ಎಂಬ ಬಲೆಮುದ್ರೆಯನ್ನು ಧರಿಸಿದ್ದರು.

ಪತ್ನಿ ಹಾಗೂ ಓರ್ವ ಪುತ್ರನನ್ನು ಹೊಂದಿರುವ ಇವರಿಗೆ ಕರ್ನಾಟಕ ಸರ್ಕಾರವು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು. ಅಲ್ಲದೆ ವಿವಿಧ ಸಂಘ ಸಂಸ್ಥೆಗಳು ಇವರನ್ನು ಗೌರವಿಸಿ ಸನ್ಮಾನಿಸಿತ್ತು. ಇವರ ನಿಧನಕ್ಕೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.

Similar News