ಜೂ.4ರಂದು ಕರ್ಣಾಟಕ ಬ್ಯಾಂಕ್‌ನ ನಿವೃತ್ತ ಸಿಇಒಗೆ ಅಭಿನಂದನೆ

Update: 2023-06-01 16:18 GMT

ಮಂಗಳೂರು: ಡಾ.ಮಹಾಬಲೇಶ್ವರ ಎಂ.ಎಸ್ ಅಭಿನಂದನಾ ಸಮಿತಿ ವತಿಯಿಂದ ಕರ್ಣಾಟಕ ಬ್ಯಾಂಕ್‌ನ ನಿವೃತ್ತ ಎಂ.ಡಿ ಹಾಗೂ ಸಿ.ಇ.ಒ ಆಗಿರುವ ಡಾ.ಮಹಾಬಲೇಶ್ವರ ಎಂ.ಎಸ್ ಅವರಿಗೆ ಸಾರ್ವಜನಿಕ ಅಭಿನಂದನಾ ಸಮಾರಂಭವನ್ನು ಜೂ.4ರಂದು ನಗರದ ಕೊಡಿಯಾಲ್ ಬೈಲ್‌ನಲ್ಲಿರುವ ಶಾರದಾ ವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಶಾರದಾ ಸಮೂಹ ವಿದ್ಯಾಸಂಸ್ಥೆಯ ಅಧ್ಯಕ್ಷ ಹಾಗೂ ಸಮಿತಿ ಡಾ.ಎಂ.ಬಿ.ಪುರಾಣಿಕ್ ತಿಳಿಸಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೂಲತಃ ಮಲೆನಾಡಿನ ಮಾವಿನ ಕುಡಿಯವರಾದ ಡಾ.ಮಹಾಬಲೇಶ್ವರ ಎಂ.ಎಸ್ 6 ವರ್ಷಗಳಿಂದ ಕರ್ಣಾಟಕ ಬ್ಯಾಂಕಿನಲ್ಲಿ ಎಂ.ಡಿ ಹಾಗೂ ಸಿ.ಇ.ಒ ಆಗಿ ಸೇವೆ ಸಲ್ಲಿಸಿದವರು. ಅನೇಕ ರೀತಿಯ ಸಮಾಜ ಸೇವೆ ಗೈದ ಇವರು ಪುರುಷೋತ್ತಮ ಪ್ರಶಸ್ತಿ, ಪರಿಮಳ ಪ್ರಶಸ್ತಿ, 2021ರ ಸಿ.ಇ.ಒ ಪ್ರಶಸ್ತಿ, ಸಾಧನಾ ರಾಜ್ಯ ಪ್ರಶಸ್ತಿ, ಅನುಗ್ರಹ ಪ್ರಶಸ್ತಿ ಹಾಗೂ ಪಂಚ ವರ್ಣ ರಾಜ್ಯೋತ್ಸವ ಪುರಸ್ಕಾರವನ್ನು ಪಡೆದಿದ್ದಾರೆ. ಇವರ ಈ ಸಮಗ್ರ ಸಾಧನೆಯನ್ನು ಮೆಚ್ಚಿ ಅಭಿನಂದಿಸಲು ಇಚ್ಛಿಸಿದ್ದೇವೆ. ಸಾರ್ವಜನಿಕ ಅಭಿನಂದನಾ ಸಮಾರಂಭದಲ್ಲಿ ಶ್ರೀ ಕ್ಷೇತ್ರ ಶರವು ಶಿಲೆ ಮೊಕ್ತೇಸ ಶರವು ರಾಘವೇಂದ್ರ ಶಾಸ್ತ್ರಿ ಆರ್ಶೀವಾದ ನೀಡಲಿದ್ದಾರೆ. ಶ್ರೀನಿವಾಸ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಸಿ.ಎ ಎ.ರಾಘವೇಂದ್ರ ರಾವ್ ಸನ್ಮಾನಿಸಲಿರುವರು. ಶಾರದಾ ಸಮೂಹ ವಿದ್ಯಾಸಂಸ್ಥೆಯ ಅಧ್ಯಕ್ಷ ಡಾ.ಎಂ.ಬಿ. ಪುರಾಣಿಕ್ ಅಧ್ಯಕ್ಷತೆ ವಹಿಸಲಿದ್ದು, ಇತರ ಗಣ್ಯ ವ್ಯಕ್ತಿಗಳು ಘನ ಉಪಸ್ಥಿತಿವಹಿಸಲಿದ್ದಾರೆ ಎಂದು ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಅಭಿನಂದನಾ ಸಮಿತಿ ಸದಸ್ಯರಾದ ಸಿಎ ಎಸ್.ಎಸ್.ನಾಯಕ್ ಹಾಗೂ ಸುಧಾಕರ್ ರಾವ್ ಪೇಜಾವರ ಉಪಸ್ಥಿತರಿದ್ದರು.

Similar News