ಒಡಿಶಾ ರೈಲು ದುರಂತದ ಕಾರಣ ಇನ್ನೂನಿಗೂಢ, ಸಿಬಿಐ ತನಿಖೆ ಇಂದು ಆರಂಭ

Update: 2023-06-06 06:14 GMT

ಹೊಸದಿಲ್ಲಿ: ಒಡಿಶಾದ ಬಾಲಸೋರ್‌ನಲ್ಲಿ ಶುಕ್ರವಾರ 278 ಮಂದಿಯನ್ನು ಬಲಿ ಪಡೆದಿರುವ ಭೀಕರ 3 ರೈಲು ಅಪಘಾತದ ತನಿಖೆಯನ್ನು ಕೇಂದ್ರೀಯ ತನಿಖಾ ದಳ (ಸಿಬಿಐ) ವಹಿಸಿಕೊಂಡಿದ್ದು, ಸಿಬಿಐ ತನಿಖಾ ತಂಡ ಮಂಗಳವಾರ ಬೆಳಗ್ಗೆ ಬಾಲಸೋರ್‌ನಲ್ಲಿ ಅಪಘಾತ ಸ್ಥಳಕ್ಕೆ ಆಗಮಿಸಿ ಒಡಿಶಾ ಪೊಲೀಸರಿಂದ ತನಿಖೆಯನ್ನು ಕೈಗೆತ್ತಿಕೊಂಡಿದೆ.

ಒಡಿಶಾ ಪೊಲೀಸರು ರೈಲು ಅಪಘಾತಕ್ಕೆ ಸಂಬಂಧಿಸಿ "ನಿರ್ಲಕ್ಷ್ಯದಿಂದ ಸಾವು ಹಾಗೂ  ಜೀವವನ್ನು ಅಪಾಯಕ್ಕೆ ಒಡ್ಡಿದ " ಆರೋಪದೊಂದಿಗೆ ಪ್ರಕರಣ ದಾಖಲಿಸಿದ್ದಾರೆ.

ಪಾಯಿಂಟ್ ಮೆಷಿನ್ ಅಥವಾ ಎಲೆಕ್ಟ್ರಾನಿಕ್ ಇಂಟರ್‌ಲಾಕಿಂಗ್ ಸಿಸ್ಟಂ ಅಥವಾ ಸಿಗ್ನಲಿಂಗ್ ದೋಷದಿಂದ ರೈಲು ಹಳಿಗಳನ್ನು ಬದಲಾಯಿಸಿದರೆ, ಉನ್ನತ ಏಜೆನ್ಸಿಯ ವಿವರವಾದ ತನಿಖೆಯಿಂದ ಮಾತ್ರ ಕ್ರಿಮಿನಲ್ ಟ್ಯಾಂಪರಿಂಗ್ ಅನ್ನು ಕಂಡುಹಿಡಿಯಬಹುದು ಎಂದು ಅಧಿಕಾರಿಗಳು ಹೇಳುವ ಮೂಲಕ ಸಿಬಿಐ ಹೆಜ್ಜೆ ಇಡುವುದು ಮಹತ್ವದ ಕ್ರಮವಾಗಿದೆ. .

ಶಾಲಿಮಾರ್-ಚೆನ್ನೈ ಸೆಂಟ್ರಲ್ ಕೋರಮಂಡಲ್ ಎಕ್ಸ್‌ಪ್ರೆಸ್, ಬೆಂಗಳೂರು-ಹೌರಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಮತ್ತು ಗೂಡ್ಸ್ ರೈಲು ಒಳಗೊಂಡ ಅಪಘಾತದ ಪ್ರಕರಣದಲ್ಲಿ ರೈಲುಗಳ ಇರುವಿಕೆಯನ್ನು  ಪತ್ತೆಹಚ್ಚುವ ಇಂಟರ್‌ಲಾಕಿಂಗ್ ವ್ಯವಸ್ಥೆಯನ್ನು ಹಾಳು ಮಾಡಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ಈ ಹಿಂದೆ ಹೇಳಿದ್ದರು.

Similar News