ಕುಂದಾಪುರ: ಹಾಸ್ಟೆಲ್ ಕಟ್ಟಡದಿಂದ ಬಿದ್ದು ವಿದ್ಯಾರ್ಥಿನಿ ಮೃತ್ಯು

Update: 2023-06-06 16:17 GMT

ಕುಂದಾಪುರ: ಬಾಲಕಿಯೋರ್ವಳು ವಸತಿ ನಿಲಯದಿಂದ ಅಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮೃತಪಟ್ಟ ಘಟನೆ ಜೂ.5ರಂದು ಬೆಳಗ್ಗೆ ವಕ್ವಾಡಿ ಎಂಬಲ್ಲಿ ನಡೆದಿದೆ.

ಮೃತರನ್ನು ಕಾರವಾರದ ರಂಜನ ಪಾಲೇಕರ್ ಎಂಬವರ ಮಗಳು ತನ್ವಿ (14) ಎಂದು ಗುರುತಿಸಲಾಗಿದೆ.

ವಕ್ವಾಡಿ ಗ್ರಾಮದ ಗುರುಕುಲ ರೆಸಿಡೆನ್ಶಿಯಲ್ ಶಾಲೆಯ ವಿದ್ಯಾರ್ಥಿನಿಯಾಗಿದ್ದು, ಹಾಸ್ಟೆಲ್ ಕಟ್ಟಡದ 2ನೇ ಮಹಡಿಯಿಂದ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾರೆಂದು ತಿಳಿದುಬಂದಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Similar News