​ಕಟ್ಟಡ ಕಾಮಗಾರಿಯ ಸಾಮಗ್ರಿ ಕಳವು : ಪ್ರಕರಣ ದಾಖಲು

Update: 2023-06-08 15:47 GMT

ಮಂಗಳೂರು, ಜೂ.8: ನಗರದ ಭಂಡಾರಿ ಬಿಲ್ಡರ್ಸ್ ವತಿಯಿಂದ ಕದ್ರಿ ಕಂಬಳದಲ್ಲಿ ನಿರ್ಮಾಣವಾಗುತ್ತಿರುವ ಕಟ್ಟಡ ಕಾಮಗಾರಿಗೆ ಸಂಬಂಧಿಸಿದ ಸಾಮಗ್ರಿಗಳನ್ನು ಕಳವು ಮಾಡಿರುವ ಬಗ್ಗೆ ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕದ್ರಿ ಕಂಬಳದಲ್ಲಿ ಭಂಡಾರಿ ವೆರ್ಟಿಕ್ ನೂತನ ಕಟ್ಟಡ ನಿರ್ಮಾಣವಾಗುತ್ತಿದ್ದು, ಇದರ ವಾಹನ ಚಾಲಕನಾಗಿ ಎರಡು ತಿಂಗಳಿಂದ ಕೆಲಸ ಮಾಡಿಕೊಂಡಿದ್ದ ಬಾಬು ಎಂಬಾತ ಜೂ.2ರಂದು ಪಿಕ್‌ಅಪ್ ವಾಹನದಲ್ಲಿ ಸುಮಾರು 90,000 ರೂ. ಬೆಲೆಬಾಳುವ ಕಬ್ಬಿಣದ ಸರಕುಗಳನ್ನು ಕಳವು ಮಾಡಿರುವುದಾಗಿ ಭಂಡಾರಿ ಬಿಲ್ಡರ್ಸ್ ಕಂಪೆನಿಯಲ್ಲಿ ಅಕೌಂಟೆಂಟ್ ಆಗಿರುವ ಪ್ರದೀಪ್ ಕುಮಾರ್ ಎಂಬವರು ದೂರಿನಲ್ಲಿ ತಿಳಿಸಿದ್ದಾರೆ.

Similar News