ಒಡಿಶಾ ರೈಲು ಅಪಘಾತ: ಮೃತದೇಹಗಳನ್ನು ಇರಿಸಲಾಗಿದ್ದ ಸರಕಾರಿ ಶಾಲೆ ನೆಲಸಮ

Update: 2023-06-09 08:26 GMT

ಹೊಸದಿಲ್ಲಿ: ಒಡಿಶಾ ರೈಲು ಅಪಘಾತದಲ್ಲಿ ಮೃತಪಟ್ಟವರ ಶವಗಳನ್ನು ಇರಿಸಲಾಗಿದ್ದ,  ತಾತ್ಕಾಲಿಕ ಶವಾಗಾರವನ್ನಾಗಿ ಮಾಡಲಾಗಿದ್ದ ಸರಕಾರಿ ಶಾಲೆಯನ್ನು ಇಂದು ನೆಲಸಮಗೊಳಿಸಲಾಗಿದೆ.

288 ಜನರ ಸಾವಿಗೆ ಕಾರಣವಾದ ಮೂರು ರೈಲು ಅಪಘಾತದ ನಂತರ ತಾತ್ಕಾಲಿಕ ಶವಾಗಾರವಾಗಿ ಬಳಸಲಾಗಿದ್ದ ಬಾಲಸೋರ್‌ನ ಸರಕಾರಿ ಬಹನಾಗಾ ಪ್ರೌಢಶಾಲೆಯ ವಿದ್ಯಾರ್ಥಿಗಳು ಶಾಲೆಯಲ್ಲಿ ತಮ್ಮ ತರಗತಿಗಳಿಗೆ ಮರಳಲು ಹಿಂದೇಟು ಹಾಕಿದ್ದರು.

ಹಲವು ವಿದ್ಯಾರ್ಥಿಗಳು ಹಾಗೂ ಪಾಲಕರು ಶಾಲೆ ಆವರಣಕ್ಕೆ ಮರಳಲು ಹಿಂದೇಟು ಹಾಕುತ್ತಿದ್ದು, ಹಳೆ ಕಟ್ಟಡವನ್ನು ಕೆಡವುವಂತೆ ಶಾಲಾ ಆಡಳಿತ ಸಮಿತಿ ರಾಜ್ಯ ಸರಕಾರಕ್ಕೆ ಮನವಿ ಮಾಡಿತ್ತು. ಕಟ್ಟಡವು ಇನ್ನು ಸುರಕ್ಷಿತವಾಗಿಲ್ಲ ಎಂದು ಸಮಿತಿಯು ಹೇಳಿಕೆ ನೀಡಿದ್ದು, ಘಟನೆಯಿಂದ ವಿದ್ಯಾರ್ಥಿಗಳು ಹಾಗೂ  ಪೋಷಕರು ಆಘಾತಕ್ಕೊಳಗಾಗಿದ್ದಾರೆ.

ಜೂನ್ 2 ರ ರೈಲು ಅಪಘಾತದ ನಂತರ 65 ವರ್ಷ ಹಳೆಯ ಶಾಲಾ ಕಟ್ಟಡಕ್ಕೆ ಹೆಪ್ಪುಗಟ್ಟಿದ ದೇಹಗಳನ್ನು ತರಲಾಯಿತು.

"ಕಿರಿಯ ವಿದ್ಯಾರ್ಥಿಗಳು ಭಯಭೀತರಾಗಿದ್ದಾರೆ. ಶಾಲೆಯು ಆಧ್ಯಾತ್ಮಿಕ ಕಾರ್ಯಕ್ರಮಗಳನ್ನು ನಡೆಸಲು ಹಾಗೂ  ಅವರ ಭಯವನ್ನು ಹೋಗಲಾಡಿಸಲು ಕೆಲವು ಆಚರಣೆಗಳನ್ನು ಅನುಸರಿಸಲು ಯೋಜಿಸಿದೆ " ಎಂದು ಬಹನಾಗಾ ಹೈಸ್ಕೂಲ್ ಮುಖ್ಯೋಪಾಧ್ಯಾಯಿನಿ ಪ್ರಮೀಳಾ ಸ್ವೈನ್ ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.

Similar News