ಶ್ರೀರಂಗಪಟ್ಟಣ | ಕಾವೇರಿ ನದಿಗೆ ಬಿದ್ದು ಸರಕಾರಿ ನೌಕರ ಆತ್ಮಹತ್ಯೆ
Update: 2025-08-19 22:34 IST
ಮಂಡ್ಯ, ಆ.19 : ತುಂಬಿ ಹರಿಯುತ್ತಿರುವ ಕಾವೇರಿ ನದಿಗೆ ಶ್ರೀರಂಗಪಟ್ಟಣದ ಬಳಿ ಸರಕಾರಿ ನೌಕರ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಮೈಸೂರು ಮೂಲದ ಅರಣ್ಯ ಇಲಾಖೆ ನೌಕರ ರೇವಣ್ಣ (53) ಶ್ರೀರಂಗಪಟ್ಟಣದ ವೆಲ್ಲೆಸ್ಲಿ ಸೇತುವೆ ಮೇಲಿಂದ ತುಂಬಿದ ಕಾವೇರಿ ನದಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸಾರ್ವಜನಿಕರಿಂದ ವಿಷಯ ತಿಳಿದ ಪೊಲೀಸರು, ಅಗ್ನಿಶಾಮಕ ದಳದವರು ಕೊಚ್ಚಿ ಹೋಗುತ್ತಿದ್ದ ವ್ಯಕ್ತಿಯ ಶವವನ್ನು ಗಂಜಾಂ ಸಮೀಪ ಮೇಲೆತ್ತಿದ್ದಾರೆ.
ವ್ಯಕ್ತಿಯ ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಶ್ರೀರಂಗಪಟ್ಟಣ ಟೌನ್ ಪೊಲೀಸ್ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಗೆ ಕೈಗೊಂಡಿದ್ದಾರೆ.