×
Ad

ಬೆಂಗಳೂರು ಬ್ಯಾರೀಸ್ ಸೆಂಟ್ರಲ್ ಕಮಿಟಿಯ ನೂತನ ಅಧ್ಯಕ್ಷರಾಗಿ ಶಬೀರ್ ಬ್ರಿಗೇಡ್ ಮರು ಆಯ್ಕೆ

Update: 2025-07-10 23:09 IST

ಬೆಂಗಳೂರು: ಬೆಂಗಳೂರಿನಲ್ಲಿ ಉದ್ಯೋಗ, ವ್ಯಾಪಾರ ಸೇರಿದಂತೆ ತಮ್ಮ ಬದುಕು ಕಟ್ಟಿಕೊಂಡಿರುವ ಕರಾವಳಿ ಭಾಗದ ಬ್ಯಾರಿ ಸಮುದಾಯದ ಯುವಕರೇ ಕಟ್ಟಿಕೊಂಡಿರುವ ಬ್ಯಾರೀಸ್ ಸೆಂಟ್ರಲ್ ಕಮಿಟಿ ಬೆಂಗಳೂರು ಇದರ ವಾರ್ಷಿಕ ವಿಶೇಷ ಮಹಾಸಭೆಯು ಕ್ವೀನ್ಸ್ ರಸ್ತೆಯಲ್ಲಿನ ದಾರುಸ್ಸಲಾಂ ಸಭಾಂಗಣದಲ್ಲಿ ನಡೆಯಿತು.

ನೂತನವಾಗಿ 55 ಸದಸ್ಯರ ಕಾರ್ಯಕಾರಿಣಿ ಸಮಿತಿಯು ಆಯ್ಕೆಗೊಂಡ ನಂತರ ಪದಾಧಿಕಾರಿಗಳ ಚುನಾವಣಾ ಪ್ರಕ್ರಿಯೆ ನಡೆಸಿ ಮುಂಬರುವ 2 ವರ್ಷಗಳ ಅವಧಿಗೆ ಹೊಸ ನಾಯಕತ್ವವನ್ನು ಆರಿಸಲಾಯಿತು. ನೂತನವಾಗಿ ರಚಿಸಲಾದ ಕಮಿಟಿಗೆ ಅಧ್ಯಕ್ಷರಾಗಿ ಶಬೀರ್ ಬ್ರಿಗೇಡ್ ಅವರನ್ನು ಪುನರಾಯ್ಕೆ ಮಾಡಲಾಯಿತು.

ಪ್ರಧಾನ ಕಾರ್ಯದರ್ಶಿ-ನಾಸಿರ್ ಕೆಂಪಿ, ಉಪಾಧ್ಯಕ್ಷರಾಗಿ ಗಫೂರ್ ಕೆಂಟ್, ಸಮದ್ ಕುಂತೂರ್, ಸಂಶುದ್ದೀನ್ ಕುಕ್ಕಾಜೆ, ಸಲೀತ್ ಮಾರ್ಥಳ್ಳಿ, ಸಲೀಂ ಸಿ.ಎಂ., ಕಾರ್ಯದರ್ಶಿಗಳಾಗಿ ಝಮೀರ್ ಉಳ್ಳಾಲ್, ಮಾಝಿನ್ ಕಾವಳಕಟ್ಟೆ, ರಹೀಮ್ ಚಿಕ್ಕಪೇಟೆ, ಸಮದ್ ಮದ್ದಡ್ಕ, ಹಾರಿಸ್ ಜಿ.ಎಸ್.ಕೆ ಅವರನ್ನು ಆಯ್ಕೆ ಮಾಡಲಾಯಿತು.

ಕೋಶಾಧಿಕಾರಿ-ರಿಫಾಯಿ ವಸಂತನಗರ ಮತ್ತು ಮಾಧ್ಯಮ ಕಾರ್ಯದರ್ಶಿ-ಬಶೀರ್ ಅಡ್ಯನಡ್ಕ, ಕಾನೂನು ಕಾರ್ಯದರ್ಶಿ-ಅಡ್ವೋಕೇಟ್ ಖಲಂದರ್ ಕೊಯ್ಲ, ಪಿ.ಆರ್ ಕಾರ್ಯದರ್ಶಿ-ಅಯ್ಯುಬ್ ಕೋರಮಂಗಲ, ಆರೋಗ್ಯ ಕಾರ್ಯದರ್ಶಿ-ರಫೀಕ್ ಪಾನೆಲ, ಕ್ರೀಡಾ ಕಾರ್ಯದರ್ಶಿ-ಬದ್ರುದ್ದಿನ್ ಕಾಜೂರ್, ಸಾಮಾಜಿಕ ಜಾಲತಾಣ ವಿಭಾಗದ ಕಾರ್ಯದರ್ಶಿ-ಆಫ್ಜಲ್ ಉಚ್ಚಿಲ ಅವರನ್ನು ಆಯ್ಕೆ ಮಾಡಲಾಯಿತು. ಸಂಘಟನಾ ಕಾರ್ಯದರ್ಶಿಗಳಾಗಿ ಶಿಹಾಬ್ ಕಾಟಿಪಳ್ಳ, ಹಾರಿಸ್ ಬೆಳ್ಮ, ಆಸೀಫ್ ಪಿ.ಕೆ., ಸವಾದ್ ಆರ್.ಟಿ ನಗರ ಖಲಂದರ್ ಅವರನ್ನು ಪದಾಧಿಕಾರಿಗಳಾಗಿ ನೇಮಿಸಲಾಯಿತು.

ಸಭೆಯು ಉಬೈದ್ ಮಲ್ಲೇಶ್ವರಂ ಅವರ ಕಿರಾಅತ್ ಮೂಲಕ ಆರಂಭಗೊಂಡಿತು. ಪ್ರಾಸ್ತಾವಿಕವಾಗಿ ಶಬೀರ್ ಬ್ರಿಗೇಡ್ ಮಾತನಾಡಿದರು. ಒಂದು ವರ್ಷ ಅವಧಿಯ ಖರ್ಚು ವೆಚ್ಚ, ವಾರ್ಷಿಕ ಕೆಲಸಕಾರ್ಯಗಳ ವರದಿಯನ್ನು ಪ್ರಧಾನ ಕಾರ್ಯದರ್ಶಿ ನಾಸಿರ್ ಕೆಂಪಿ ವಾಚಿಸಿದರು. ಹೊಸ ನಾಯಕತ್ವ ಆಯ್ಕೆ ಪ್ರಕ್ರಿಯೆಯನ್ನು ಬಿಸಿಸಿಯ ಮಾರ್ಗದರ್ಶಕರಾದ ಸುಹೈಲ್ ಕಂದಕ್ ಹಾಗೂ ಹನೀಫ್ ಖಾನ್ ಕೊಡಾಜೆ ನೆರವೇರಿಸಿದರು.

ಸಭೆಯಲ್ಲಿ ಸಂಶುದ್ದೀನ್ ಕುಕ್ಕಾಜೆ ಸ್ವಾಗತಿಸಿದರು. ನಾಸಿರ್ ಕೆಂಪಿ ಧನ್ಯವಾದಗೈದರು. ಕಾರ್ಯಕ್ರಮವನ್ನು ಬಶೀರ್ ಅಡ್ಯನಡ್ಕ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News