×
Ad

ಮೈಸೂರು ದಸರಾದ ಪ್ರಧಾನ ಕವಿಗೋಷ್ಠಿಗೆ ಯುವ ಸಾಹಿತಿ ಡಾ.ಸಂಗಪ್ಪ ತೌಡಿ ಆಯ್ಕೆ

Update: 2025-09-22 22:19 IST

ಬೀದರ್ : ಮೈಸೂರು ದಸರಾ ಮಹೋತ್ಸವದ ಅಂಗವಾಗಿ ನಡೆಯುವ ಪ್ರಧಾನ ಕವಿಗೋಷ್ಠಿಗೆ ಬೀದರ್ ಜಿಲ್ಲೆಯ ಯುವ ಸಾಹಿತಿ ಡಾ. ಸಂಗಪ್ಪ ತೌಡಿ ಅವರನ್ನು ಆಯ್ಕೆ ಮಾಡಲಾಗಿದೆ.

ಕರ್ನಾಟಕ ಸರ್ಕಾರ ಹಾಗೂ ಮೈಸೂರು ಜಿಲ್ಲಾಡಳಿತ ಸಮಿತಿ ಆಯೋಜಿಸುತ್ತಿರುವ ಈ ಕವಿಗೋಷ್ಠಿ ಸೆ. 27ರಂದು ಮೈಸೂರು ವಿಶ್ವವಿದ್ಯಾಲಯದ ಮಾನಸ ಗಂಗೋತ್ರಿ ಬಯಲು ರಂಗಮಂದಿರದಲ್ಲಿ ಜರುಗಲಿದೆ.

ಡಾ. ಸಂಗಪ್ಪ ತೌಡಿ ಅವರು ಈಗಾಗಲೇ ಐದು ಕೃತಿಗಳು ರಚಿಸಿ ಪ್ರಕಟಿಸಿದ್ದಾರೆ. ಪ್ರಸ್ತುತ ಅವರು ಬಿಜಾಪುರ್ ನ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಪ್ರಾದೇಶಿಕ ಅಧ್ಯಯನ ಕೇಂದ್ರದಲ್ಲಿ ಅತಿಥಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News