×
Ad

ಉಳ್ಳಾಲ: ರೋಗಿಗಳಿಗೆ ಶಿಲೀಂಧ್ರಪೂರಿತ ಮಾತ್ರೆಗಳ ವಿತರಣೆ; ವೀಡಿಯೋ ವೈರಲ್

Update: 2023-09-22 16:08 IST

ಉಳ್ಳಾಲ: ರೋಗಿಗಳಿಗೆ ಉಪಯೋಗಕ್ಕೆ ಯೋಗ್ಯವಲ್ಲದ ಶಿಲೀಂಧ್ರಪೂರಿತ ಮಾತ್ರೆಗಳನ್ನು ನೀಡಿದ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಬೀರಿ ಬಳಿ ಇರುವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದಿದ್ದು, ಈ ಬಗ್ಗೆ ವಿಡಿಯೋ ವೈರಲ್ ಆಗಿದೆ. ಈ ಬಗ್ಗೆ ವಿವರಿಸಿದಾಗ ಎಲ್ಲರಿಗೂ ಜ್ವರಕ್ಕೆ ಅದೇ ಮಾತ್ರೆ ನೀಡಲಾಗುತ್ತದೆ ಎಂದು ಸಿಬ್ಬಂದಿ ತಿಳಿಸಿದ್ದಾಗಿ ರೋಗಿಯೊಬ್ಬರು ಆರೋಪಿಸಿದ್ದಾರೆ.

ಘಟನೆ ವಿವರ: ಕೆಸಿನಗರ ನಿವಾಸಿ ಹಸೈನಾರ್ ಅವರ‌ ಪತ್ನಿ ಹಾಗೂ ಆರನೇ ತರಗತಿ ವಿದ್ಯಾರ್ಥಿನಿ ಫಾತಿಮತ್‌ ರಾಫಿಯಾ ಬೀರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಜ್ವರಕ್ಕೆ ಔಷಧಿ ಪಡಕೊಳ್ಳಲು ಗುರುವಾರ ತೆರಳಿದ್ದರು. ಚಿಕಿತ್ಸೆ ನಡೆಸಿದ ವೈದ್ಯರು ಎರಡು ದಿನ ದ ಮಟ್ಟಿಗೆ ಸೇವಿಸಲು ಮಾತ್ರೆಗಳನ್ನು ನೀಡಿದ್ದರು. ಹಸೈನಾರ್ ಅವರ‌ ಪುತ್ರಿ ಫಾತಿಮತ್‌ ರಾಫಿಯಾ ಜ್ವರಕ್ಕೆ ಕುಡಿಯಲೆಂದು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲೇ ಮಾತ್ರೆ ಯನ್ನು ಪ್ಯಾಕ್ ನಿಂದ ತೆರೆದು ನೋಡಿದಾಗ ಮಾತ್ರೆಗಳಲ್ಲಿ ಫಂಗಸ್ ತರಹದ ಕಲೆಗಳಿದ್ದವು. ಈ ಬಗ್ಗೆ ಅವರು ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಯಲ್ಲಿ ವಿಚಾರಿಸಿದ್ದು, ಈ ವೇಳೆ ಸಿಬ್ಬಂದಿ ‌ಎಲ್ಲಾ ಮಾತ್ರೆಗಳು ಹೀಗೇ ಇವೆ. ಏನಾಗುವುದಿಲ್ಲ ಎಂದು ತಿಳಿಸಿದ್ದಾರೆ. ಇದರಿಂದ ಆಕ್ರೋಶಗೊಂಡ ರೋಗಿಗಳಾದ ತಾಯಿ ಮಗಳು ಆ ಮಾತ್ರೆಯ‌ ಫೋಟೋ ತೆಗೆದು ವೈದ್ಯಾಧಿಕಾರಿಗಳಿಗೆ ಕಳಿಸಿ ದೂರು ನೀಡಿದ್ದಾರೆ. ಬಳಿಕ ಅವರು ಖಾಸಗಿ ವೈದ್ಯಕೀಯ ಕೇಂದ್ರಕ್ಕೆ ತೆರಳಿ ಬೇರೆ ವೈದ್ಯರಿಂದ ಔಷಧಿ ಪಡೆದು ವಾಪಾಸು ಆಗಿದ್ದಾರೆ ಎಂದು ತಿಳಿದು ಬಂದಿದೆ.

ಇವರಿಗೆ ಪ್ರಾಥಮಿಕ ಆರೋಗ್ಯ ಕೇಂದ್ರ ದಲ್ಲಿ ನೀಡಿದ ಶಿಲೀಂಧ್ರಗೊಂಡ ಔಷಧಿ ಯ ಚಿತ್ರ ಹಾಗೂ ವಿಡಿಯೋ ವೈರಲ್ ಆಗಿದ್ದು,ಇಂತಹ ಔಷಧಿ ನೀಡಬಹುದೇ ಎಂದು ರೋಗಿಯ ಕುಟುಂಬಸ್ಥರು ಪ್ರಶ್ನಿಸಿದ್ದಾರೆ.

ಡಿಎಚ್ಒ ಗೆ ದೂರು

ಬೀರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಲ್ಲಿ ಫಂಗಸ್ ತರಹದ ಕಲೆ ಇರುವ ಔಷಧಿ ನೀಡಿದ ಬಗೆ ಔಷಧಿ ಪಡಕೊಂಡ ರೋಗಿಯ ಕುಟುಂಬಸ್ಥರು ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಎಚ್.ಆರ್ ತಿಮ್ಮಯ್ಯ ಅವರಿಗೆ ದೂರು ನೀಡಿದ್ದು,ಇಂತಹ ಔಷಧಿ ನೀಡುವ ಆರೋಗ್ಯ ಕೇಂದ್ರದ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಆರೋಗ್ಯ ಅಧಿಕಾರಿ ಡಾ. ಎಚ್.ಆರ್ ತಿಮ್ಮಯ್ಯ ಅವರು " ಬೀರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಲ್ಲಿ ಶಿಲೀಂದ್ರ ಗೊಂಡ ಮಾತ್ರೆ ನೀಡಿದ ಬಗೆ ನನಗೆ ದೂರು ಬಂದಿದೆ. ಜ್ವರದ ಮಾತ್ರೆ ಬೇರೆ ಕೂಡಾ ಇದೆ. ಫಂಗಸ್ ಬಂದ ಮಾತ್ರೆ ಕೊಡದಂತೆ ಈಗಾಗಲೇ ಸೂಚನೆ ನೀಡಿದ್ದೇನೆ. ಈಗ ಆ ಮಾತ್ರೆ ಬದಲಿಗೆ ಬೇರೆ ಔಷಧಿ ವ್ಯವಸ್ಥೆ ಮಾಡಲಾಗಿದೆ" ಎಂದು ತಿಳಿಸಿದ್ದಾರೆ.

ಜ್ವರದ ಮಾತ್ರೆ ಯಲ್ಲಿ ಕಲೆ ಇರುವ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಶುಕ್ರವಾರ ಪರಿಶೀಲನೆ ಮಾಡಲಾಗಿದೆ. ಜ್ವರದ ಮಾತ್ರೆಯಲ್ಲಿ ಫಂಗಸ್ ತರಹದ ಕಲೆ ಇರುವುದು ಹೌದು. ಆದರೆ ಮಾತ್ರೆ ಅವಧಿ ಮುಗಿಯಲಿಲ್ಲ. 2025 ರ ವರೆಗೆ ಅವಧಿ ಇದೆ. ಆದರೆ ಆರೋಗ್ಯ ಜಾಗೃತಿ ಯ ದೃಷ್ಟಿಯಿಂದ ಈಗ ಆ ಮಾತ್ರೆ ಕೊಡುವುದು ನಿಲ್ಲಿಸಲಾಗಿದೆ. ಇದಕ್ಕೆ ಬದಲಿ ಔಷಧಿ ವ್ಯವಸ್ಥೆ ಮಾಡಲಾಗಿದೆ

ಡಾ. ಸುಜಯ್, ತಾಲೂಕು ಆರೋಗ್ಯಾಧಿಕಾರಿ


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News