×
Ad

ಕಿನ್ಯ: ಧಾರ್ಮಿಕ ಉಪನ್ಯಾಸ ಸಮಾರೋಪ

Update: 2025-01-30 22:49 IST

ಉಳ್ಳಾಲ: ಪರಸ್ಪರ ಪ್ರೀತಿ ವಿಶ್ವಾಸ ನಮಲ್ಲಿರಬೇಕು. ಪ್ರೀತಿಸುವುದನ್ನು ಕಲಿಯದಿದ್ದರೆ ನಮಗೆ ರಕ್ಷಣೆ ಸಿಗದು ಎಂದು ಫೈಝಲ್ ನಗರ ಮುದರ್ರಿಸ್ ಝುಬೈರ್ ದಾರಿಮಿ ಹೇಳಿದರು.

ಅವರು ಕಿನ್ಯ ಕೇಂದ್ರ ಜುಮ್ಮಾ ಮಸೀದಿ ಇದರ ಆಶ್ರಯದಲ್ಲಿ ನಡೆದ ಧಾರ್ಮಿಕ ಉಪನ್ಯಾಸ ಹಾಗೂ ಕೂಟು ಝಿಯಾರತ್ ಕಾರ್ಯಕ್ರಮದಲ್ಲಿ ಧಾರ್ಮಿಕ ಉಪನ್ಯಾಸ ನೀಡಿದರು.

ಭಾರತದಲ್ಲಿರುವ ನಮ್ಮಲ್ಲಿ ಒಗ್ಗಟ್ಟಿನ ಬದುಕು ಇರಬೇಕು ಎಂದು ಹೇಳಿದರು. ಸಯ್ಯಿದ್ ಅಮೀರ್ ತಂಙಳ್ ದುಆ ನೆರವೇರಿಸಿದರು.

ಸಯ್ಯಿದ್ ಇಬ್ರಾಹಿಂ ಭಾತಿಷ ತಂಙಳ್ ಕೂಟು ಝಿಯಾರತ್ ನ ನೇತೃತ್ವ ವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕೇಂದ್ರ ಜುಮ್ಮಾ ಮಸೀದಿ ಅಧ್ಯಕ್ಷ ಕೆ.ಎಸ್.ಇಸ್ಮಾಯಿಲ್ ಹಾಜಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು

ಹನೀಫ್ ಮದನಿ ಖುತುಬಿನಗರ, ಕಿನ್ಯ ಕುತುಬಿಯ ಮದ್ರಸ ಸದ್ ರ್ ಫಾರೂಕ್ ದಾರಿಮಿ, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಖಾದರ್ ಹಾಜಿ, ಕಾರ್ಯದರ್ಶಿ ಹಮೀದ್, ಕೋಶಾಧಿಕಾರಿ ಬಾವು ಹಾಜಿ ಸಾಗ್ ,ಉಪಾಧ್ಯಕ್ಷ ಇಬ್ರಾಹಿಂ, ಅಶ್ರಫ್ ಮಾರಾಠಿಮೂಲೆ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News