×
Ad

ಗದಗ ಜಿಲ್ಲೆಗೂ ತಟ್ಟಿದ ಸಾರಿಗೆ ಬಸ್ ಮುಷ್ಕರದ ಬಿಸಿ

Update: 2025-08-05 10:13 IST

ಗದಗ: ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರದ ಬಿಸಿ ಗದಗ ಜಿಲ್ಲೆಗೂ ತಟ್ಟಿದೆ. ಬೆಳಗ್ಗೆ 6 ಗಂಟೆಯಿಂದಲೇ ಯಾವುದೇ ಬಸ್ ಗಳು ರಸ್ತೆಗೆ ಇಳಿದಿಲ್ಲ. ಇದರಿಂದ ಪ್ರಯಾಣಿಕರು ಪರದಾಡುವಂತ ಸ್ಥಿತಿ ಎದುರಾಗಿದೆ.

 

ಸೋಮವಾರ ರಾತ್ರಿ ಗ್ರಾಮೀಣ ಭಾಗಗಳಿಗೆ ಹೋದ ಬಸ್ ಗಳು ಮಾತ್ರ ನಗರ ಪ್ರದೇಶಕ್ಕೆ ಬಂದಿದ್ದು, ಯಾವುದೇ ಬಸ್ ಚಾಲಕ-ನಿರ್ವಾಹಕರು ಇಂದು ಕೆಲಸಕ್ಕೆ ಹಾಜರಾಗಿಲ್ಲ.

ಮುಷ್ಕರದ ಮಾಹಿತಿ ಇಲ್ಲದೆ ಪ್ರತಿನಿತ್ಯ ಹೊಟ್ಟೆಪಾಡಿಗಾಗಿ ಕೆಲಸಕ್ಕಾಗಿ ಅರಸಿ ಬರುವವರ ಬಸ್ಸಿಲ್ಲದ ಸಂಕಷ್ಟಕ್ಕೀಡಾದರು. ದೂರದಿಂದ ಪ್ರಯಾಣ ಬೆಳಸಿರುವ ಪ್ರಯಾಣಿಕರು ಖಾಸಗಿ ವಾಹನಗಳ ಮೊರೆ ಹೋಗುತ್ತಿದ್ದಾರೆ.

ಗದಗ ಜಿಲ್ಲೆಯಲ್ಲಿ ಕೆಎಸ್ಸಾರ್ಟಿಸಿ ಒಟ್ಟು 8 ಘಟಕಗಳಿದ್ದು, ಪ್ರತಿನಿತ್ಯ ಸುಮಾರು 560ಕ್ಕೂ ಹೆಚ್ಚು ಬಸ್ ಗಳು ಸಂಚರಿಸುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News