×
Ad

ಆಳಂದ | ರೈತರ ಹಿತಾಸಕ್ತಿಗಳನ್ನು ಕಾಪಾಡಲು ಒಗ್ಗಟ್ಟಿನ ಬಲವನ್ನು ತಂದುಕೊಳ್ಳುವುದು ಅಗತ್ಯವಾಗಿದೆ: ಭೀಮಾಶಂಕರ ಮಾಡಿಯಾಳ

Update: 2025-07-07 19:46 IST

ಕಲಬುರಗಿ: ರೈತರ ಹಿತಾಸಕ್ತಿಗಳನ್ನು ಕಾಪಾಡಲು ಒಗ್ಗಟ್ಟಿನ ಬಲವನ್ನು ತಂದುಕೊಳ್ಳುವುದು ಇಂದಿನ ಅಗತ್ಯವಾಗಿದೆ. ರೈತರು, ಕಾರ್ಮಿಕರು, ದುಡಿಯುವ ವರ್ಗ, ಮತ್ತು ಬಡವರ ಪರವಾಗಿ ಕಿಸಾನ್ ಸಭಾದ ಸತತ ಹೋರಾಟಕ್ಕೆ ಕೈಜೋಡಿಸಬೇಕು ಎಂದು ಅಖಿಲ ಭಾರತ ಕಿಸಾನಸಭಾ ಜಿಲ್ಲಾಧ್ಯಕ್ಷ ಭೀಮಾಶಂಕರ ಮಾಡಿಯಾಳ ಅವರು ಹೇಳಿದರು.

ಆಳಂದ ತಾಲೂಕಿನ ಕಿಣ್ಣಿಅಬ್ಬಾಸ್ ಗ್ರಾಮದಲ್ಲಿ ಅಖಿಲ ಭಾರತ ಕಿಸಾನ್ ಸಭಾದ ಕಾರ್ಯಕ್ರಮದಲ್ಲಿ ನಡೆದ ಗ್ರಾಮ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ ಬಳಿಕ ಅವರು ರೈತರನ್ನುದ್ದೇಶಿಸಿ ಮಾತನಾಡಿದರು.

"ರೈತ ಸಮುದಾಯವು ತಮ್ಮ ಹಕ್ಕುಗಳನ್ನು ಪಡೆಯಲು ಮತ್ತು ನ್ಯಾಯವನ್ನು ಕಾಣಲು ಒಗ್ಗಟ್ಟಿನಿಂದ ಮುಂದುವರಿಯಬೇಕು. ಕಿಸಾನ್ ಸಭಾವು ರೈತರಿಗೆ ಆರ್ಥಿಕ, ಸಾಮಾಜಿಕ, ಮತ್ತು ರಾಜಕೀಯ ನ್ಯಾಯವನ್ನು ಒದಗಿಸಲು ಸರ್ಕಾರದ ವಿರುದ್ಧ ನಿರಂತರವಾಗಿ ಹೋರಾಡುತ್ತಿದೆ," ಎಂದು ಹೇಳಿದರು. 

ರೈತರ ಸಮಸ್ಯೆಗಳನ್ನು ಪರಿಹರಿಸಲು ಸರ್ಕಾರವು ಗಂಭೀರವಾಗಿ ಕಾರ್ಯನಿರ್ವಹಿಸಬೇಕು ಎಂದು ಅವರು ಒತ್ತಾಯಿಸಿದರು.

ಈ ವೇಳೆ ಕಿಸಾನಸಭಾ ರಾಜ್ಯ ಮಂಡಳಿಯ ಕಾಯಾಧ್ಯಕ್ಷ ಮೌಲಾ ಮುಲ್ಲಾ, ಸಿಪಿಐ ಜಿಲ್ಲಾ ಕಾರ್ಯದರ್ಶಿ ಪ್ರಭುದೇವ ಯಳಸಂಗಿ ಸಭೆಯನ್ನುದ್ದೇಶಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಕಿಸಾನಸಭಾ ಗ್ರಾಮದ ಘಟಕದ ಅಧ್ಯಕ್ಷರಾಗಿ ಮೋಹನ ಬಾಬರೆ, ಉಪಾಧ್ಯಕ್ಷ ಪ್ರಥ್ವಿರಾಜ ಸಿರೂರೆ, ಪರಮೇಶ್ವರ ಗೌಳಿ, ಕಾರ್ಯದರ್ಶಿಯನ್ನಾಗಿ ಪರಮೇಶ್ವರ ಕೂಗನೂರ, ಹಣಮಂತ ಸೋನಕಾಂಬಳೆ, ವಿಜಯಕುಮಾರ ಬಮದೆ ಮತ್ತು ಖಜಾಂಚಿಯಾಗಿ ದಸ್ತಗಿರ ಜಮಾದಾರ, ಗೌರವ ಅಧ್ಯಕ್ಷ ಸುಭಾಷ ನಿಕಂ, ಕಾನೂನು ಸಲಹೆಗಾರ ಪಂಡಿತ ಸಲಗರ ಅಲ್ಲದೆ ಸದಸ್ಯರನ್ನಾಗಿ ತಾಯರ ಅಲಿ ಕಮಲಾಪೂರೆ, ಶ್ರೀಪತಿ ಸೂರವಾಸೆ, ಮಲ್ಲಿಕಾನಾಥ ಶಖಾಪೂರೆ,ಲಕ್ಷ್ಮಣ ಕೊಳಸೂರೆ ಅವರನ್ನು ಆಯ್ಕೆಮಾಡಿ ಮುಖಂಡರು ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಗ್ರಾಮದ ರೈತರು ಮುಖಂಡರು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News