×
Ad

ಚಿತ್ತಾಪುರ | ಮಂಗಗಳ ಹಾವಳಿ ತಡೆಯಲು ಗ್ರಾಪಂ ಪಿಡಿಓಗೆ ಮನವಿ

Update: 2025-08-20 17:31 IST

ಕಲಬುರಗಿ: ಚಿತ್ತಾಪುರ ತಾಲೂಕಿನ ದಂಡೋತಿ ಗ್ರಾಮದಲ್ಲಿ ಮಂಗಗಳ ಹಾವಳಿ ಹೆಚ್ಚಾಗಿದ್ದು, 4-5 ಜನರಿಗೆ ಕಚ್ಚಿ ಗಾಯಗೊಳಿಸಿದೆ. ಕೂಡಲೇ ಮಂಗಗಳಿಂದ ಕಚ್ಚಿಸಿಕೊಂಡ ಗಾಯಾಳುಗಳಿಗೆ ಪರಿಹಾರ ಹಾಗೂ ಮಂಗಗಳನ್ನು ಸೆರೆ ಹಿಡುಯವಂತೆ ಒತ್ತಾಯಿಸಿ ಕರವೇ ಗ್ರಾಮ ಘಟಕ ಅಧ್ಯಕ್ಷ ಮೈನೋದ್ದೀನ್ ತೊನಸನಳ್ಳಿ ನೇತೃತ್ವದಲ್ಲಿ ಪದಾಧಿಕಾರಿಗಳು ಗ್ರಾಪಂ ಪಿಡಿಒಗೆ ಮನವಿ ಪತ್ರ ಸಲ್ಲಿಸಿದರು.

ನಂತರ ಮಾತನಾಡಿದ ಅವರು, ದಂಡೋತಿ ಗ್ರಾಮದಲ್ಲಿ ಮಂಗಗಳ ಹಾವಳಿ ಹೆಚ್ಚಾಗಿದ್ದು, ಇಲ್ಲಿಯವರೆಗೆ 4-5 ಜನರಿಗೆ ಮಂಗಗಳು‌ ಕಚ್ಚಿ ಗಾಯಗೊಳಿಸಿದೆ. ಗ್ರಾಮದ ಜನರು ದಿನನಿತ್ಯ ತಮ್ಮ ತಮ್ಮ ಹೊಲಗಳಿಗೆ ತೆರಳಲು, ಮನೆಯಿಂದ ಹೊರಗಡೆ ಬರಲು ಭಯಭೀತರಾಗಿದ್ದಾರೆ. ಶಾಲಾ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು ಶಾಲೆಗಳಿಗೆ ತೆರಳಲು ಕೂಡ ಹೆದರುತ್ತಿದ್ದಾರೆ. ಹೀಗಾಗಿ ಕೂಡಲೇ ಸಂಬಂಧಿಸಿದ ಅಧಿಕಾರಿಗಳು, ಗ್ರಾ.ಪಂ.ಯವರು ಗ್ರಾಮದ ಕಾಳಜಿ ವಹಿಸಿ ಮಂಗಗಳ ಹಾವಳಿ ತಪ್ಪಿಸಿ ಅವುಗಳನ್ನು ಸ್ಥಳಾಂತರ ಮಾಡಬೇಕು. ಇಲ್ಲಿಯವರೆಗೆ ಮಂಗಗಳಿಂದ ಕಚ್ಚಿಕೊಂಡ ಸಾರ್ವಜನಿಕರಿಗೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಕರವೇ ಗ್ರಾಮ ಘಟಕ ಪ್ರಧಾ‌ನ ಕಾರ್ಯದರ್ಶಿ ಶಾಂತಪ್ಪ, ಜಗನ್ನಾಥ, ರೀಯಾಜ್, ಜೀವಣಪ್ಪ, ಜಗನ್ನಾಥ ಸೇರಿದಂತೆ ‌ಗ್ರಾಮದ ಅನೇಕ ಮುಖಂಡರು ಹಾಗೂ ಮಹಿಳೆಯರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News