ಕಲಬುರಗಿ | ಚಿಂಚೋಳಿ ಸರಕಾರಿ ನೌಕರರ ಸಂಘದ ಸದಸ್ಯರಾಗಿ ಗಂಗಾಧರ ಹೊಸಳ್ಳಿ ಆಯ್ಕೆ
Update: 2025-09-13 19:17 IST
ಕಲಬುರಗಿ: ಚಿಂಚೋಳಿ ತಾಲೂಕಿನ ರಾಜ್ಯ ಕರ್ನಾಟಕ ಸರಕಾರಿ ನೌಕರರ ಸಂಘ ತಾಲೂಕು ಶಾಖೆ ಚಿಂಚೋಳಿಯ ಸಂಘದ ಸದಸ್ಯರಾಗಿ ಸುಲೇಪೇಟ ಗ್ರಾಮದ ಸರಕಾರಿ ಪದವಿ ಪೂರ್ವ ಕಾಲೇಜಿನ ಗಂಗಾಧರ ಹೊಸಳ್ಳಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಸರಕಾರಿ ನೌಕರರ ಸಂಘದ ಅಧ್ಯಕ್ಷ ದೇವೀಂದ್ರಪ್ಪ ಹೋಳ್ಕರ್ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಅಧ್ಯಕ್ಷ ದೇವೀಂದ್ರಪ್ಪ ಹೋಳ್ಕರ್, ಡಾ. ಮಲ್ಲಿಕಾರ್ಜುನ ಪಾಲಮೂರ, ಶಿಕ್ಷಕರ ಸಂಘದ ಅಧ್ಯಕ್ಷ ಸುರೇಶ ಕೊರವಿ, ಎಸ್.ಬಿ. ಗಂಗನಕರ್ , ಅಣ್ಣಾರಾಯ ವಡಳ್ಳಿ, ಸಿದ್ದಲಿಂಗಯ್ಯ, ರಾಘವೇಂದ್ರ, ಕುಪೇಂದ್ರ, ಪ್ರದೀಪಕುಮಾರ, ರಾಜಕುಮಾರ, ಆನಂದ ಉಪನ್ಯಾಸಕರು ಮತ್ತು ಶಿಕ್ಷಕರು ಹಾಜರಿದ್ದರು.