ಕಲಬುರಗಿ | 21ನೇ ದಿನದ ಗಣೇಶ ವಿಸರ್ಜನೆ: ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ಪಥಸಂಚಲನ
Update: 2025-09-15 22:50 IST
ಕಲಬುರಗಿ: ನಗರದ 21ನೇ ದಿನದ ಗಣೇಶ ವಿಸರ್ಜನೆ ಹಿನ್ನೆಲೆಯಲ್ಲಿ ಭದ್ರತಾ ದೃಷ್ಟಿಯಿಂದ ಭಾನುವಾರ ಪೊಲೀಸ್ ಪಥಸಂಚಲನ ನಡೆಯಿತು. ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ. ಅವರ ನೇತೃತ್ವದಲ್ಲಿ ಪಥಸಂಚಲನ ಜರುಗಿತು.
ಪಥಸಂಚಲನವು ಹಿಂದೂ ಮಹಾ ಗಣಪತಿ ಸ್ಥಾಪನಾ ಸ್ಥಳದಿಂದ ಪ್ರಾರಂಭವಾಗಿ ಪ್ರಕಾಶ್ ಏಷಿಯನ್ ಮಾಲ್, ಚೌಕ್ ಸರ್ಕಲ್, ಮಾರ್ಕೆಟ್ ಮಸ್ಜಿದ್, ಚಪ್ಪಲ್ ಬಜಾರ್, ಮೈಬಾಸ್ ಮಸ್ಜಿದ್, ಬ್ರಹ್ಮಪುರ ಪೊಲೀಸ್ ಠಾಣೆ, ಜಗತ್ ವೃತ್ತ, ಸಿಟಿ ಬಸ್ ಸ್ಟ್ಯಾಂಡ್ ಮಾರ್ಗವಾಗಿ ಹಿಂದೂ ಮಹಾ ಗಣಪತಿ ಸ್ಥಳಕ್ಕೆ ಬಂದು ಮುಕ್ತಾಯವಾಯಿತು.
ಈ ಪಥಸಂಚಲನದಲ್ಲಿ ಸಿ.ಎ.ಆರ್ ಘಟಕ, ಸಿವಿಲ್ ಸಿಬ್ಬಂದಿ ಹಾಗೂ ರಾಪಿಡ್ ಆಕ್ಷನ್ ಫೋರ್ಸ್ (RAF) ಸೇರಿದಂತೆ 350ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿ-ಸಿಬ್ಬಂದಿ ಭಾಗವಹಿಸಿದರು.