×
Ad

ಕಲಬುರಗಿ: ಚಲಿಸುತ್ತಿದ್ದ ಬಸ್‌ನಿಂದ ಬಿದ್ದು ವಿಶೇಷ ಚೇತನ ವಿದ್ಯಾರ್ಥಿ ಸಾವು

Update: 2024-01-06 14:08 IST

ಲಕ್ಷ್ಮಿಪುತ್ರ ಅಮೃತ ಮಾಡ್ಯಾಳೆ (20)

ಕಲಬುರಗಿ: ಪದವಿ ಪರೀಕ್ಷೆ ಬರೆಯಲು ತೆರಳುತ್ತಿದ್ದ ವಿಶೇಷ ಚೇತನ ವಿದ್ಯಾರ್ಥಿ ಚಲಿಸುತ್ತಿದ್ದ ಬಸ್‌ನಿಂದ ಇಳಿಯಲು ಹೋಗಿ ಕೆಳಗೆ ಬಿದ್ದು ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.

ತಾಲೂಕಿನ ಸಾವಳೇಶ್ವರ ಗ್ರಾಮದ ಲಕ್ಷ್ಮಿಪುತ್ರ ಅಮೃತ ಮಾಡ್ಯಾಳೆ (20) ಮೃತ ವಿದ್ಯಾರ್ಥಿ. ಪಟ್ಟಣದ ವಿ.ಕೆ.ಜಿ ಪದವಿ ಕಾಲೇಜಿನಲ್ಲಿ ಬಿಎ ಓದುತ್ತಿದ್ದ ಎಂದು ತಿಳಿದುಬಂದಿದೆ.

ವಿಶೇಷ ಚೇತನ ವಿದ್ಯಾರ್ಥಿಯಾಗಿದ್ದ ಲಕ್ಷ್ಮಿಪುತ್ರ ಪದವಿ ಪರೀಕ್ಷೆ ಬರೆಯಲು ಗ್ರಾಮದಿಂದ ಆಳಂದ ಬಸ್‌ ನಿಲ್ದಾಣಕ್ಕೆ ಬಂದು, ಅಲ್ಲಿಂದ ಪರೀಕ್ಷೆ ಕೇಂದ್ರದ ಸಮೀಪ ಬಸ್‌ ನಿಲುಗಡೆ ಮಾಡದ ಕಾರಣ ಚಲಿಸುತ್ತಿದ್ದ ಬಸ್‌ನಿಂದ ಇಳಿಯುವಾಗ ನಿಯಂತ್ರಣ ತಪ್ಪಿ ಬಿದ್ದಿದ್ದಾನೆ. ಇದರಿಂದ ವಿದ್ಯಾರ್ಥಿ  ತಲೆಗೆ ತೀವ್ರ ಪೆಟ್ಟುಬಿದ್ದು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ.

ಈ ಕುರಿತು ಆಳಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News