ಕಲಬುರಗಿ | ಜಿಲ್ಲಾ ಔಷಧಿ ವ್ಯಾಪಾರಿಗಳ ಸಂಘದ ವತಿಯಿಂದ ʼನಿರಂತರ ಕಲಿಕಾ ಕಾರ್ಯಕ್ರಮʼಕ್ಕೆ ಚಾಲನೆ
Update: 2025-07-12 22:13 IST
ಕಲಬುರಗಿ : ನಗರದ ಶ್ರೀ ಚಂದ್ರಶೇಖರ ಪಾಟೀಲ ರೇವೂರ ಔಷಧ ಭವನದಲ್ಲಿ, ಜಿಲ್ಲಾ ಔಷಧಿ ವ್ಯಾಪಾರಿಗಳ ಸಂಘದ ವತಿಯಿಂದ ಆಯೋಜಿಸಲಾದ ʼನಿರಂತರ ಕಲಿಕಾ ಕಾರ್ಯಕ್ರಮʼಕ್ಕೆ ಸಂಘದ ಅಧ್ಯಕ್ಷರು ಹಾಗೂ ಮಾಜಿ ಶಾಸಕ ದತ್ತಾತ್ರೇಯ ಸಿ.ಪಾಟೀಲ ರೇವೂರ ಅವರು ಸಸಿಗೆ ನೀರು ಹಾಕುವ ಮೂಲಕ ಚಾಲನೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಓಂಪ್ರಕಾಶ ಸಾವಧಾನಿ, ಕಾರ್ಯದರ್ಶಿಗಳಾದ ರವೀಂದ್ರ ಜೋಶಿ, ವಿಜಯಕುಮಾರ ಹವಾಲ್ದಾರ, ಸೈಯದ್ ಮೊಜಲ್, ಪ್ರಹ್ಲಾದ ಪೂಜಾರಿ ಸೇರಿದಂತೆ ಸಂಘದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದರು.