×
Ad

ಕಲಬುರಗಿ: ಕಾರಿನಲ್ಲಿ ಕರೆದೊಯ್ದು ವ್ಯಕ್ತಿಯ ಭೀಕರ ಹತ್ಯೆ; ಆರೋಪಿಯ ಬಂಧನ

Update: 2024-04-30 23:14 IST

ಕಲಬುರಗಿ: ತನ್ನ ಪತ್ನಿಯೊಂದೊಗೆ ಅನೈತಿಕ ಸಂಬಂಧ ಹೊಂದಿರುವ ಶಂಕೆಯಲ್ಲಿ ವ್ಯಕ್ತಿಯೋರವನನ್ನು ಕಾರಿನಲ್ಲಿ ಕರೆದೊಯ್ದು ಹತ್ಯೆ ಮಾಡಿರುವ ಘಟನೆ ಆಳಂದ ಹಳೆ ಚೆಕ್ ಪೋಸ್ಟ್ ಮಧ್ಯೆ ಮಂಗಳವಾರ ನಡೆದಿದೆ.

ರವಿಕುಮಾರ್ ಕೊಲೆಯಾದ ವ್ಯಕ್ತಿ. ಆರೋಪಿ ವಿಜಯ ಕುಮಾರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. 

ತನ್ನ ಹೆಂಡತಿಯೊಂದಿಗೆ ಅನೈತಿಕ ಸಂಬಂಧ ಹೊಂದಿರುವ ಶಂಕೆಯಲ್ಲಿ ರವಿಕುಮಾರ್ ನನ್ನು ಕಾರಿನಲ್ಲಿ ಕರೆದೊಯ್ದು ಹತ್ಯೆ ನಡೆಸಿ ನಂತರ ಕಾರಿಗೆ ಬೆಂಕಿ ಹಚ್ಚಿದ್ದಾನೆ.

ಘಟನಾ ಸ್ಥಳಕ್ಕೆ ಪೊಲೀಸ್ ಭೇಟಿ ನೀಡಿ ತನಿಖೆ ಮುಂದುವರೆಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News