×
Ad

ಕಲಬುರಗಿ | ಮದುವೆ ಮಾಡಲು ನಿರಾಕರಿಸಿದಕ್ಕೆ ತಾಯಿಯನ್ನೇ ಕೊಂದ ಮಗ!

Update: 2024-02-05 19:04 IST

ಕಲಬುರಗಿ: ಮದುವೆ ಮಾಡಲು ನಿರಾಕರಿಸಿದಕ್ಕೆ ತಾಯಿಯನ್ನೇ ಕಟ್ಟಿಗೆಯಿಂದ ಹೊಡೆದು ಕೊಲೆ ಮಾಡಿರುವ ಅಮಾನವೀಯ ಘಟನೆ ಕೊಂಚಾವರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ ಎಂದು ವರದಿಯಾಗಿದೆ.

ಚಿಂಚೋಳಿ ತಾಲ್ಲೂಕಿನ ಪೋಚಾವರಂ ಗ್ರಾಮದ ಶೋಭಾ ಅಂಜಪ್ಪ (45) ಕೊಲೆಯಾದ ಮಹಿಳೆ. 

ಕುಡಿತದ ಚಟ ಹೊಂದಿದ್ದ ಮಗ ಅನೀಲ ಮದುವೆ ಮಾಡುವಂತೆ ತಾಯಿಯನ್ನು ಪೀಡಿಸುತ್ತಿದ್ದ. ನೀನೇ ಸರಿಯಾಗಿ ಬದುಕು ನಡೆಸಲು ಆಗುತ್ತಿಲ್ಲ ನಿನ್ನನ್ನು ನಾನೇ ಸಾಕಬೇಕಾಗಿದೆ. ಇನ್ನು ಮದುವೆ ಮಾಡಿ ಇನ್ನೊಂದು ಹೆಣ್ಣಿನ  ಬಾಳೇಕೆ ಹಾಳುಮಾಡಲಿ ಎಂದು ತಾಯಿ ಮದುವೆ ಮಾಡಲು ನಿರಾಕರಿಸಿದ್ದಳು. ಇದರಿಂದ ಕುಪಿತನಾಗಿ ಅನೀಲ ಕಟ್ಟಿಗೆಯಿಂದ ಹೊಡೆದು ತಾಯಿಯನ್ನು ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.

ಈ ಸಂಬಂಧ ಕೊಂಚಾವರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News