×
Ad

ಕಲಬುರಗಿ | ಜೀವದ ಹಂಗು ತೊರೆದು ಸೇತುವೆ ದಾಟುವ ದುಸ್ಸಾಹಸ: ಸೇತುವೆ ನಿರ್ಮಾಣಕ್ಕೆ ಗ್ರಾಮಸ್ಥರಿಂದ ಆಗ್ರಹ

Update: 2025-09-11 21:11 IST

ಕಲಬುರಗಿ: ಧಾರಾಕಾರ ಮಳೆ ಸುರಿದಿರುವ ಪರಿಣಾಮ ಕಮಲಾಪುರ ತಾಲೂಕಿನ ಜೀವಣಗಿ ಸೇತುವೆ ಸಮೀಪ ಭಾರೀ ಪ್ರವಾಹ ಉಂಟಾಗಿದೆ.

ಜೀವಣಗಿಗೆ ಸಂಪರ್ಕಿಸುವ ರಸ್ತೆ ಸೇತುವೆ ಮೇಲೆ ನೀರು ಹರಿದು ಸಾರ್ವಜನಿಕರು ತಮ್ಮ ಪ್ರಾಣದ ಹಂಗು ತೊರೆದು ಹರಿಯುವ ಪ್ರವಾಹದ ನೀರನ್ನೇ ದಾಟುವ ದುಸ್ಸಾಹಸ ಮಾಡಿದ್ದಾರೆ.

ಮಳೆಗೆ ಹಳೆಯ ಸೇತುವೆ ಸಂಪೂರ್ಣವಾಗಿ ಕೊಚ್ಚಿಕೊಂಡು ಹೋಗಿದ್ದರಿಂದ ಜನರು ತೊಂದರೆ ಅನುಭವಿಸುತ್ತಿದ್ದಾರೆ.‌ ಈ ಕುರಿತಾಗಿ ಶಾಶ್ವತ ಪರಿಹಾರಕ್ಕಾಗಿ ಹೊಸ ಸೇತುವೆ ಶೀಘ್ರ ನಿರ್ಮಾಣ ಮಾಡುವಂತೆ ಗ್ರಾಮಸ್ಥರು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News