ಅರಕೇರಾ: ನಾಗಡದಿನ್ನಿ ಗ್ರಾ.ಪಂಗೆ ಸಿಇಒ ದಿಢೀರ್ ಭೇಟಿ, ಪರಿಶೀಲನೆ

ಗ್ರಾಮದ ಕುಡಿಯುವ ನೀರಿನ ಕೆರೆ ಪರಿಶೀಲಿಸಿದ ಸಿಇಒ ಶ್ರೀ ಈಶ್ವರ್ ಕಾಂದೂ

Update: 2026-07-22 15:31 IST

ರಾಯಚೂರು: ಜು. 22: ಅರಕೇರಾ ತಾಲ್ಲೂಕಿನ ನಾಗಡದಿನ್ನಿ ಗ್ರಾಮ ಪಂಚಾಯತಿಯ ತಿಪ್ಪಲದಿನ್ನಿ, ನಾಗಡದಿನ್ನಿ ಹಾಗೂ ಯರಮರಸ್ ಗ್ರಾಮಗಳಲ್ಲಿ ಕುಡಿಯುವ ನೀರಿನ ಕೆರೆಗಳಿಗೆ ರಾಯಚೂರು ಜಿ.ಪಂ. ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀ ಈಶ್ವರ್ ಕಾಂದೂ ರವರು ಭೇಟಿ ನೀಡಿ ಪರಿಶೀಲನೆ ಮಾಡಿದರು.

ಮೊದಲಿಗೆ ತಿಪ್ಪಲದಿನ್ನಿ ಕೆರೆಗೆ ಭೇಟಿ ನೀಡಿ, ಬಂಗಾರಪ್ಪನ ಕೆರೆಯಿಂದ ತಿಪ್ಪಲದಿನ್ನಿ ಕೆರೆಗೆ ಪೈಪಲೈನ್ ಅಳವಡಿಸಲು ಸೂಚಿಸಿದರು. ನಂತರ ಕೆರೆಯ ವಿಸ್ತೀರ್ಣವನ್ನು ಹೆಚ್ಚಿಸಲು ತಿಳಿಸಿದರು.

ತದನಂತರ ನಾಗಡದಿನ್ನಿ ಕುಡಿಯುವ ನೀರಿನ ಕೆರೆಗೆ ಭೇಟಿ ನೀಡಿ, ಅರ್ಧ ಕಿ.ಮೀ. ನಷ್ಟು ಬಂಗಾರಪ್ಪನ ಕೆರೆಗೆ ಕಾಲುವೆ ನಿರ್ಮಾಣ ಮಾಡಲು ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಿಗೆ ಸೂಚಿಸಿದರು. ಶುದ್ಧ ಕುಡಿಯುವ ನೀರಿನ ಘಟಕಗಳು (RO Plants) ನಿರಂತರವಾಗಿ ಮತ್ತು ಸಮರ್ಪಕವಾಗಿ ಕಾರ್ಯನಿರ್ವಹಿಸಬೇಕು ಎಂದರು. ವಾಟರ್ಮ್ಯಾನ್ ಅವರಿಂದ ನೀರಿನ ವಿತರಣೆ ಸಮಯ, ದಿನಗಳು ಹಾಗೂ ಟ್ಯಾಂಕ್‌ಗಳಿಂದ ನೀರು ಪೂರೈಸುವ ವ್ಯವಸ್ಥೆಯ ಬಗ್ಗೆ ಮಾಹಿತಿ ಪಡೆದರು. ಗ್ರಾಮಸ್ಥರೊಂದಿಗೆ ಜಾನುವಾರುಗಳಿಗೂ ಸಮರ್ಪಕ ನೀರಿನ ಲಭ್ಯತೆ ಬಗ್ಗೆ ಖಚಿತಪಡಿಸಿಕೊಂಡರು. ಜಲಧಾರೆ, ಜಲ ಜೀವನ್ ಮಿಷನ್ ಕುಡಿಯುವ ನೀರಿನ ಯೋಜನೆಗಳ ಪ್ರಸ್ತುತ ವರದಿಯನ್ನು ಪಡೆದುಕೊಂಡರು.

ಯರಮರಸ್ ಕುಡಿಯುವ ನೀರಿನ ಕೆರೆಗೆ ಭೇಟಿ ನೀಡಿ, ಸಿಸಿ ರಸ್ತೆ, ವಿವಿಜಿ ರಾಮ್ ಜಿ ಯೋಜನೆ:

ಕೆರೆಗಳ ದುರಸ್ತಿ ಹಾಗೂ ಅಗತ್ಯ ಅಭಿವೃದ್ಧಿ ಕಾಮಗಾರಿಗಳನ್ನು ಈ ಯೋಜನೆಯಡಿ ಸೇರಿಸಲು ಸಲಹೆ ನೀಡಿದರು.

ಗ್ರಾಮದಲ್ಲಿ ಉಪ ಗ್ರಂಥಾಲಯ, ಗ್ರಾಮ ಪಂಚಾಯತಿ ಹೊಸ ಕಟ್ಟಡ ನಿರ್ಮಾಣ ಹಾಗೂ ಗ್ರಾಮ ಪಂಚಾಯತ್ ವ್ಯಾಪ್ತಿಯ ಬರುವ ಎಲ್ಲಾ ಕೆರೆಗಳಿಗೆ ಶುದ್ಧ ಸಂಸ್ಕರಣ ಘಟಕಗಳನ್ನು ನಿರ್ಮಿಸಿ, ಓ.ಹೆಚ್.ಟಿ. ಟ್ಯಾಂಕ್ ಮೂಲಕ ಮನೆಗಳಿಗೆ ನೀರು ಸರಬರಾಜು ಆಗುವಂತೆ ಕ್ರಮವಹಿಸಲು ಸಂಬಂಧಿಸಿದ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಸೂಚಿಸಿದರು.

ಈ ವೇಳೆ ಡಾ. ವಾಲ್ಮೀಕಿ ಕಾರ್ಯನಿರ್ವಾಹಕ ಅಧಿಕಾರಿಗಳು, ತಾ.ಪಂ. ಅರಕೇರಾ, ರಾಜೇಂದ್ರ ಕುಮಾರ್ ಜಿ. ಕಾರ್ಯನಿರ್ವಾಹಕ ಅಧಿಕಾರಿಗಳು, ತಾ.ಪಂ. ದೇವದುರ್ಗ, ಅಣ್ಣರಾವ್ ಸಹಾಯಕ ನಿರ್ದೇಶಕರು, ಹೀರಲಾಲ್ ಕಾರ್ಯಪಾಲಕ ಅಭಿಯಂತರರು, ಸೋಮನಾಥ್ ಪಂಚಾಯತಿ ಅಭಿವೃದ್ಧಿ ಅಧಿಕಾರಿ, ನಾಗೇಂದ್ರ ಕಾರ್ಯದರ್ಶಿಗಳು, ವ್ಯಾಟರಮಾನ್ ಹಾಗೂ ಗ್ರಾಮ ಪಂಚಾಯತಿ ಸಿಬ್ಬಂದಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News