ದೇವದುರ್ಗ : ಚರಂಡಿ, ಶೌಚಾಲಯ ಸಮಸ್ಯೆ ಪರಿಹರಿಸುವಂತೆ ಕರವೇ ಆಗ್ರಹ

Update: 2026-07-22 15:00 IST

ದೇವದುರ್ಗ-ಜು. 21: ತಾಲ್ಲೂಕಿನ ಜಾಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಾರ್ಡ್ ನಂ. 01 ಮತ್ತು 09ರಲ್ಲಿ ಕಸದ ತ್ಯಾಜ್ಯ, ಚರಂಡಿ ಅವ್ಯವಸ್ಥೆ, ಸಾರ್ವಜನಿಕ ಶೌಚಾಲಯದ ದುಸ್ಥಿತಿ ಹಾಗೂ ವಿದ್ಯುತ್ ಕಂಬಗಳಿಗೆ ಬಳ್ಳಿಗಳು ಸುತ್ತಿಕೊಂಡಿರುವ ಸಮಸ್ಯೆಗಳನ್ನು ಕೂಡಲೇ ಪರಿಹರಿಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಹಾಗೂ ಹೋಬಳಿ ಘಟಕದ ಮುಖಂಡರು ಮಂಗಳವಾರ ಪಿಡಿಓ ಲಕ್ಷ್ಮಿ ಅವರಿಗೆ ಮನವಿ ಸಲ್ಲಿಸಿದರು.

ವಾರ್ಡ್ ನಂ. 01ರ ಸರ್ಕಾರಿ ಶೌಚಾಲಯದ ಸುತ್ತಮುತ್ತ ಕಸದ ರಾಶಿ ತೆರವುಗೊಳಿಸಿ, ಮಹಿಳೆಯರ ಸಾರ್ವಜನಿಕ ಶೌಚಾಲಯ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು. ವಾರ್ಡ್ ನಂ. 09ರಲ್ಲಿ ಚರಂಡಿಗಳನ್ನು ಸ್ವಚ್ಛಗೊಳಿಸಿ, ಕೊಳಚೆ ನೀರು ರಸ್ತೆ ಮೇಲೆ ಹರಿಯದಂತೆ ವ್ಯವಸ್ಥೆ ಕಲ್ಪಿಸಬೇಕು. ಅಲ್ಲದೆ, ವಿದ್ಯುತ್ ಕಂಬಗಳಿಗೆ ಸುತ್ತಿಕೊಂಡಿರುವ ಬಳ್ಳಿಗಳನ್ನು ತೆರವುಗೊಳಿಸಿ ಸಾರ್ವಜನಿಕರ ಸುರಕ್ಷತೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.

ಒಂದು ವಾರದೊಳಗೆ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಲ್ಪಿಸದಿದ್ದರೆ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಗ್ರಾಮ ಪಂಚಾಯಿತಿ ಎದುರು ಹೋರಾಟ ನಡೆಸಲಾಗುವುದು ಎಂದು ಸಂಘಟನೆಯ ಪದಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಇದೆ ಸಂಧರ್ಭದಲ್ಲಿ ತಾಲೂಕು ಅಧ್ಯಕ್ಷ ನಂದಪ್ಪ ಮಡ್ಡಿ, ಹೋಬಳಿ ಅಧ್ಯಕ್ಷ ತಮ್ಮಣ್ಣ ಹೇರುಂಡಿ, ಭೀಮಣ್ಣ ಲಿಂಗದಹಳ್ಳಿ, ಭೀಮರಾಯ ಮಕಾಶಿ, ವೆಂಕಟೇಶ ಜಗರಕಲ್, ಹುಲುಗಪ್ಪ, ರಮೇಶ ಭಜಂತ್ರಿ, ಈಶಪ್ಪ ಮಡಿವಾಳ, ನಿಂಗಪ್ಪ ಮಡಿವಾಳ, ರಾಘವೇಂದ್ರ ಮೊದಿ, ಉಮೇಶ, ರಮೇಶ ಕರುಬರ್, ದುರುಗಪ್ಪ ಅಗಸಿಮನಿ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News