×
Ad

ರಾಯಚೂರು ರಿಪೋಟರ್ಸ್ ಗಿಲ್ಡ್ ಬೆಳ್ಳಿ ಮಹೋತ್ಸವ : ಕಥೆ, ಕವನಕ್ಕೆ ಅರ್ಜಿ ಆಹ್ವಾನ

Update: 2026-01-24 23:07 IST

ರಾಯಚೂರು: ಇಲ್ಲಿನ ರಾಯಚೂರು ರಿಪೋರ್ಟ್‌ರ್ಸ್ ಗಿಲ್ಡ್ ರಾಯಚೂರು ಬೆಳ್ಳಿ ಮಹೋತ್ಸವದ ಸಂಭ್ರಮಾಚರಣೆಯ ಅಂಗವಾಗಿ ಜಿಲ್ಲೆ ಹಾಗೂ ರಾಜ್ಯದ ಎಲ್ಲಾ ಪತ್ರಕರ್ತರಿಗಾಗಿ ಕಥೆ, ಕವನ, ಲೇಖನಗಳನ್ನು ಆಹ್ವಾನಿಸಲಾಗಿದೆ.

ಆಯ್ಕೆಯಾದ ಕಥೆ, ಕವನ, ಲೇಖನಗಳನ್ನ ಪ್ರತ್ಯೇಕ ಮೂರು ಪುಸ್ತಕಗಳಾಗಿ ಪ್ರಕಟಿಸಲು ನಿರ್ಧರಿಸಲಾಗಿದೆ.ಪತ್ರಕರ್ತರಿಗಾಗಿ ರಾಜ್ಯಮಟ್ಟದ ಕವನ ಹಾಗೂ ಕಥಾ ಸ್ಪರ್ಧೆ ಹಾಗೂ ರಾಯಚೂರು ಜಿಲ್ಲಾ ಪತ್ರಕರ್ತರಿಂದ ವೃತ್ತಿ ಅನುಭವದ ಲೇಖನಗಳ ಆಹ್ವಾನ ಮಾಡಲಾಗಿದೆ.

ಕವನ, ಕಥೆ, ಲೇಖನಗಳನ್ನು ಕಳುಹಿಸಲು ಫೆ.25ರ, 2026 ಕೊನೆಯದಿನವಾಗಿದ್ದು, ಕಥಾ ಸ್ಪರ್ಧೆಯ ವಿಜೇತರಿಗೆ ಪ್ರಥಮ ಬಹುಮಾನವಾಗಿ 10,000 ರೂ, ದ್ವಿತೀಯ ಬಹುಮಾನ 7,000 ರೂ. ತೃತೀಯ ಬಹುಮಾನ 3,000 ರೂ. ಗಳ ನಿಗದಿಪಡಿಸಲಾಗಿದೆ. ಕವನ ಸ್ಪರ್ಧೆಯ ವಿಜೇತರಿಗೆ ಪ್ರಥಮ ಬಹುಮಾನ 5,000 ರೂ. ದ್ವಿತೀಯ ಬಹುಮಾನ 3000 ರೂ., ತೃತೀಯ ಬಹುಮಾನ 2,000 ರೂ. ನೀಡಲಾಗುತ್ತಿದೆ.

ಕಥೆ, ಕವನ ಸ್ಪರ್ಧೆಗೆ ಹಾಗೂ ಆಹ್ವಾನಿತ ಲೇಖನಗಳಿಗೆ ಯಾವುದೇ ನೋಂದಣಿ ಶುಲ್ಕ ಇರುವುದಿಲ್ಲ. ರಾಯಚೂರು ಜಿಲ್ಲಾ ಪತ್ರಕರ್ತರು 400 ಪದಗಳ ಮಿತಿಯಲ್ಲಿ ಲೇಖನ ಕಳುಹಿಸಬೇಕು, ಆಯ್ಕೆಯಾದ ಲೇಖನಗಳನ್ನು ಪುಸ್ತಕದಲ್ಲಿ ಪ್ರಕಟಿಸಲಾಗುವುದು. ಲೇಖನಗಳಿಗೆ ಯಾವುದೇ ಬಹುಮಾನಗಳು ಇರುವುದಿಲ್ಲ.

ನಿಯಮಗಳು :

ಸ್ಪರ್ಧೆಗೆ ಕಳುಹಿಸುವ ಕಥೆ, ಕವನ ಸ್ವರಚಿತವಾಗಿರಬೇಕು .ಯಾವುದೇ ಪುಸ್ತಕ, ಪತ್ರಿಕೆಗಳಲ್ಲಿ ಪ್ರಕಟವಾಗಿರಬಾರದು. ಕಥೆ 1500 ಗರಿಷ್ಠ ಪದಮಿತಿಯಲ್ಲಿರಬೇಕು. ಸ್ಪರ್ಧೆಯಲ್ಲಿ ಭಾಗವಹಿಸುವವರು ಕಡ್ಡಾಯವಾಗಿ ಪತ್ರಕರ್ತರಾಗಿರಬೇಕು. ಕಥೆ, ಕವನದ ಜೊತೆ ಕೆಲಸ ಮಾಡುವ ಸುದ್ದಿ ಸಂಸ್ಥೆ ನೀಡಿದ ಗುರುತಿನ ಚೀಟಿ/ಪತ್ರ ಅಥವಾ ಅಕ್ರಿಡಿಯೇಶನ್ ಚೀಟಿ ಕಡ್ಡಾಯವಾಗಿ ಲಗತ್ತಿಸಬೇಕು. ಒಬ್ಬ ಪತ್ರಕರ್ತ ಎರಡೂ ವಿಭಾಗದಲ್ಲಿ ಸ್ಪರ್ಧಿಸಬಹುದು ಒಂದು ಕಥೆ, ಒಂದು ಕವನ ಮಾತ್ರ ಕಳುಹಿಸಬೇಕು. ಲೇಖನ, ಕಥೆ, ಕವನವನ್ನು ನುಡಿ/ಯೂನಿಕೋಡ್ ತಂತ್ರಾಂಶದಲ್ಲಿ ಸಿದ್ದಪಡಿಸಿ ಇ ಮೇಲ್ : rrgraichur@gmail.com ಗೆ ಕಳುಹಿಸಬೇಕು.

ಪ್ರತ್ಯೇಕ ಹಾಳೆಯಲ್ಲಿ ಸ್ವ-ಪರಿಚಯ ಬರೆದು ಕಳುಹಿಸಬೇಕು. ಹೆಸರು, ವಿಳಾಸ, ಕಿರುಪರಿಚಯ, ಭಾವಚಿತ್ರ, ಮೊಬೈಲ್ ಸಂಖ್ಯೆ, ಇ-ಮೇಲ್ ವಿಳಾಸ ನಮೂದಿಸಿರಬೇಕು. ಕಥೆ, ಕವನ, ಲೇಖನಗಳ ಆಯ್ಕೆ ಸಮಿತಿ ತೀರ್ಮಾನವೇ ಅಂತಿಮವಾಗಿರಲಿದೆ.

ಹೆಚ್ಚಿನ ಮಾಹಿತಿಗಾಗಿ: ಮೊ.ಸಂ: 9964804206, 9739334156, 8971451949, 9902059734 ಸಂಪರ್ಕಿಸಬಹುದಾಗಿದೆ.

ವೆಬ್ ಸೈಟ್: www.raichurreportersguild.com ಗೆ ಸಂಪರ್ಕಿಸಬಹುದು ಎಂದು ರಿಪೋಟರ್ಸ್ ಗಿಲ್ಡ್ ಅಧ್ಯಕ್ಷ ವಿಜಯ್ ಜಾಗಟಗಲ್ ಹಾಗೂ ಪ್ರಧಾನ ಕಾರ್ಯದರ್ಶಿ ವೆಂಕಟೇಶ ಹೂಗಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News