×
Ad

ಸಿ.ಎಸ್. ಷಡಾಕ್ಷರಿಗೆ ಶಿವಮೊಗ್ಗ ಕರ್ತವ್ಯದಿಂದ ಬಿಡುಗಡೆ, ಕೋಲಾರಕ್ಕೆ ಹೋಗಲು ಸೂಚನೆ

Update: 2023-11-11 19:48 IST

ಸಿ.ಎಸ್. ಷಡಾಕ್ಷರಿ 

ಶಿವಮೊಗ್ಗ: ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರೂ, ಲೆಕ್ಕಾಧಿಕಾರಿಯೂ ಆಗಿರುವ ಸಿ.ಎಸ್. ಷಡಾಕ್ಷರಿ ಅವರನ್ನು ಕಚೇರಿ ಕರ್ತವ್ಯದಿಂದ ಬಿಡುಗಡೆಗೊಳಿಸಿ  ಸ್ಥಳೀಯ ಲೆಕ್ಕ ಪರಿಶೋಧನಾ ವರ್ತುಲ ಇದರ ಜಂಟಿ ನಿರ್ದೇಶಕರು ಆದೇಶಿದ್ದಾರೆ.

ಜಂಟಿ ನಿರ್ದೇಶಕರ‌ ಕಚೇರಿಯಲ್ಲಿ ಸಿ.ಎಸ್.ಷಡಾಕ್ಷರಿ ಲೆಕ್ಕಾಧೀಕ್ಷರಾಗಿದ್ದರು. ಅವರನ್ನು ನ.09 ರಂದು ಅಪರಾಹ್ನ ಕಚೇರಿ ಕರ್ತವ್ಯದಿಂದ ಬಿಡುಗಡೆಗೊಳಿಸಿ,ಉಪನಿರ್ದೇಶಕರ ಕಚೇರಿ,ಸಮಾಜ ಕಲ್ಯಾಣ ಇಲಾಖೆ ಕೋಲಾರ ಇಲ್ಲಿಗೆ ವರದಿ ಮಾಡಿಕೊಳ್ಳಲು ಸೂಚಿಸಿದ್ದಾರೆ. 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News