×
Ad

ಕುಂದಾಪುರ: ಮಟ್ಕಾ ಜುಗಾರಿ ಅಡ್ಡೆಗೆ ಪೊಲೀಸ್ ದಾಳಿ; ಐವರು ವಶಕ್ಕೆ

Update: 2023-06-15 16:05 IST

ಕುಂದಾಪುರ, ಜೂ.15: ಮಟ್ಕಾ ಜುಗಾರಿಗೆ ಸಂಬಂಧಿಸಿ ಜಿಲ್ಲೆಯ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಐವರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.



ಜೂ.14ರಂದು ಕುಂದಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ವಡೇರ ಹೋಬಳಿ ಗ್ರಾಮದ ಟಿಟಿ ರೋಡ್ ಬಳಿ ಸ್ಥಳೀಯ ನಿವಾಸಿ ಗಣೇಶ್(37)ಹಾಗೂ ಜೂ.13ರಂದು ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಸಂಜೀವ ಬಳ್ಕೂರು ಕಳ್ಳಿಗುಡ್ಡೆಯ ಮೊಗವೀರ(55) ಮತ್ತು ಕಾಳಾವರ ಗ್ರಾಮದ ಅಭಿಮಾನ್ ಬಾರ್ ಬಳಿ ಗಿಳಿಯಾರಿನ ರಾಕೇಶ್ (28), ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಗಂಗೊಳ್ಳಿ ಗುಂದಿಹಿತ್ಲುವಿನ ಭಾಸ್ಕರ ಪೂಜಾರಿ (66) ಹಾಗೂ ಗಂಗೊಳ್ಳಿ ಬಸ್ಸ್ ನಿಲ್ದಾಣದ ಬಳಿ ಹಕ್ಲಾಡಿಯ ದೇವೇಂದ್ರ ಆಚಾರ್ಯ(28) ಎಂಬವರನ್ನು ಪೊಲೀಸರು ನಗದಿನೊಂದಿಗೆ ವಶಕ್ಕೆ ಪಡೆದುಕೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News