×
Ad

ರಾಜ್ಯಮಟ್ಟದ ಕಬ್-ಬುಲ್‌ಬುಲ್ ಉತ್ಸವಕ್ಕೆ ಸಿದ್ಧತೆ

Update: 2025-08-26 19:33 IST

ಉಡುಪಿ, ಆ.26: ಪಾಜಕದ ಆನಂದತೀರ್ಥ ವಿದ್ಯಾಲಯದಲ್ಲಿ ಪ್ರತಿಷ್ಠಿತ ರಾಜ್ಯಮಟ್ಟದ ಕಬ್ ಮತ್ತು ಬುಲ್‌ಬುಲ್ ಉತ್ಸವವನ್ನು ಆತಿಥ್ಯ ವಹಿಸಲು ತಯಾರಿಗಳು ನಡೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ಸೋಮವಾರ ಶಾಲಾ ಆವರಣದಲ್ಲಿ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್‌ನ ಹಲವು ಗಣ್ಯರು ಪಾಲ್ಗೊಂಡು ಸಭೆ ನಡೆಸಿದರು.

ಭಾರತ ಸ್ಕೌಟ್ಸ್ ಮತ್ತು ಗೈಡ್ಸ್‌ನ ರಾಜ್ಯ ಮುಖ್ಯ ಆಯುಕ್ತ ಡಾ.ಪಿ.ಜಿ.ಆರ್. ಸಿಂಧಿಯಾ, ಉಡುಪಿ ಜಿಲ್ಲಾ ಮುಖ್ಯ ಆಯುಕ್ತ ಜಯಕರ ಶೆಟ್ಟಿ ಇಂದ್ರಾಳಿ, ಜಿಲ್ಲಾ ಸ್ಕೌಟ್ ಆಯುಕ್ತ ಜನಾರ್ದನ್ ಕೊಡವೂರು, ಹಾಗೂ ರಾಜ್ಯ ಸಂಘಟನಾ ಕಾರ್ಯದರ್ಶಿ ಪ್ರಭಾಕರ ಭಟ್, ರಾಜ್ಯ ಸಂಘಟನಾ ಸಹ ಕಾರ್ಯದರ್ಶಿ ಸುಮನ್ ಶೇಖರ್ ಭಾಗವಹಿಸಿ ಉತ್ಸವದ ರೂಪುರೇಷೆ ಗಳನ್ನು ಸಿದ್ಧಪಡಿಸಿಲಾಯಿತು.

ಈ ಮಹಾ ಶಿಬಿರದಲ್ಲಿ 1,200ಕ್ಕೂ ಹೆಚ್ಚು ಕಬ್ ಮತ್ತು ಬುಲ್ಬುಬುಲ್ ಗಳು, 250 ಶಿಕ್ಷಕರು ಮತ್ತು 150 ರೋವರ್ ಹಾಗೂ ರೇಂಜರ್ ಸ್ವಯಂ ಸೇವಕರು ಭಾಗವಹಿಸಲಿದ್ದಾರೆ.

ಸಭೆಯಲ್ಲಿ ಆನಂದತೀರ್ಥ ಟ್ರಸ್ಟ್‌ನ ವ್ಯವಸ್ಥಾಪಕ ಟ್ರಸ್ಟಿ ಮಧ್ವರಾಜ್ ಭಟ್, ಆನಂದತೀರ್ಥ ವಿದ್ಯಾಲಯದ ಪ್ರಾಚಾರ್ಯ ಡಾ.ಗೀತಾ ಶಶಿಧರ್, ಫ್ಲಾಕ್ ಲೀಡರ್‌ಗಳು, ಕಬ್ ಮಾಸ್ಟರ್‌ಗಳು ಹಾಗೂ ಸ್ಕೌಟ್ ಮತ್ತು ಗೈಡ್ ನಾಯಕರು, ಕಾಲೇಜು ಉಪನ್ಯಾಸಕ ಸೌರಭ್ ಸಿ. ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News