×
Ad

ಕುಂಭಾಶಿ ಭಾಗದಲ್ಲಿ ಚಿರತೆ ಕಾಟ: ಬೋನು ಇಟ್ಟ ಅರಣ್ಯ ಇಲಾಖೆ

Update: 2025-09-02 20:43 IST

ಕುಂದಾಪುರ, ಸೆ.2: ಇಲ್ಲಿಗೆ ಸಮೀಪದ ವಕ್ವಾಡಿ, ಕುಂಭಾಶಿ ಮತ್ತು ಮೂಡುಗೋಪಾಡಿ ಪರಿಸರದಲ್ಲಿ ಚಿರತೆ ಕಾಣಿಸಿಕೊಂಡಿದ್ದು ಸ್ಥಳೀಯರಲ್ಲಿ ಆತಂಕ ಹೆಚ್ಚಿದೆ.

ಮುಸ್ಸಂಜೆಯಾಗುತ್ತಲೆ ಚಿರತೆ ಸಂಚಾರ ಕಂಡುಬರುತ್ತಿದ್ದು ಈ ಪ್ರದೇಶದಲ್ಲಿ ಚಿರತೆ ಓಡಾಡುವ ದೃಶ್ಯ ಸ್ಥಳೀಯ ಸಿಸಿಟಿವಿಯಲ್ಲಿ ಚಿರತೆ ಸೆರೆಯಾಗಿದೆ. ತಡರಾತ್ರಿ ಕುಂಭಾಶಿಯ ಸಮೀಪದ ಚಿರತೆ ಪ್ರತ್ಯಕ್ಷಗೊಂಡಿದ್ದು ದೃಶ್ಯಾವಳಿ ಯಲ್ಲಿ ಸೆರೆಯಾಗಿದೆ.

ಸ್ಥಳೀಯರ ಪ್ರಕಾರ ಚಿರತೆ ಈಗಾಗಲೇ ಹಲವು ಸಾಕು ಪ್ರಾಣಿಗಳನ್ನು ಹೊತ್ತೊಯ್ದಿದೆ. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಕೂಡಲೇ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

ಸಾರ್ವಜನಿಕರ ದೂರಿನ ಮೇರೆಗೆ ಚಿರತೆ ಸೆರೆಗಾಗಿ ಕಳೆದೆರಡು ದಿನಗಳ ಹಿಂದೆ ಬೋನು ಇಡಲಾಗಿದ್ದು ಕಾರ್ಯಾಚರಣೆ ನಡೆಸಲಾಗುತ್ತದೆ ಎಂದು ಕುಂದಾಪುರ ಅರಣ್ಯ ಇಲಾಖೆ ಆರ್‌ಎಫ್‌ಓ ರಾಘವೇಂದ್ರ ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News